ಭಾನುವಾರ, ಡಿಸೆಂಬರ್ 4, 2011

>

ಸೋಮವಾರ, ನವೆಂಬರ್ 7, 2011

" ಹೊಸಬೆಳಕು"

ವೇದ ಆಧಾರಿತ ಸತ್ಯ ಸಂಪ್ರದಾಯಗಳತ್ತ ಬೆಳಕನ್ನು ಚಲ್ಲುವ ನೂತನ ದಾರಾವಾಹಿ ಇದೇ 13 ರಿಂದ  ಪ್ರತೀ ಭಾನುವಾರ ಬೆಳಿಗ್ಗೆ 9.30 ರಿಂದ 10.00ರ ವರಗೆ ಡಿಡಿ ಚಂದನದಲ್ಲಿ ಮೂಡಿಬರಲಿದೆ. ಅಣ್ಣ ತಂಗಿಯರ ಸಂವಾದ ರೂಪದ ಈ ದಾರಾವಾಹಿಯಲ್ಲಿ ಚಿತ್ರ ನಟಿ ವಿನಯ ಪ್ರಸಾದ್ ತಂಗಿಯ ಪಾತ್ರದಲ್ಲಿಯೂ ಹಾಗೂ ವೇದಾಧ್ಯಾಯೀ ಶ್ರೀ  ಸುಧಾಕರ ಶರ್ಮರು ಅಣ್ಣನ ಪಾತ್ರದಲ್ಲೂ ನಟಿಸಿದ್ದು ವೇದಕಾಲದ ಹಲವು ಸಂಪ್ರದಾಯಗಳನ್ನು ಪರಿಚಯಿಸಿ ಕೊಡಲಿದ್ದಾರೆ. ನೀವು ನಿಮ್ಮ ಬಂಧು ಮಿತ್ರರೊಡಗೂಡಿ ಈ ದಾರಾವಾಹಿಯನ್ನು ನೋಡಿ ,ನಿಮ್ಮ ಅಭಿಪ್ರಾಯಗಳನ್ನು\ಸಂದೇಹಗಳನ್ನು ವೇದಸುಧೆಗೆ  ಬರೆಯಿರಿ. ಶ್ರೀ ಶರ್ಮರು ನಿಮ್ಮ ಸಂದೇಹಗಳಿಗೆ ಉತ್ತರಿಸಲಿದ್ದಾರೆ.ನಿಮ್ಮ ಅಭಿಪ್ರಾಯಗಳ ಜೊತೆಗೆ ಶರ್ಮರ ಉತ್ತರವನ್ನೂ ಸಹ ವೇದಸುಧೆಯಲ್ಲಿ ಪ್ರಕಟಿಸಲಾಗುವುದು.

ಶನಿವಾರ, ಅಕ್ಟೋಬರ್ 8, 2011

"ಈಶಾವಾಸ್ಯಮ್"




ಸತ್ಸಂಗಕ್ಕಾಗಿ ನನ್ನ ಮನೆಯ ಮೇಲೊ೦ದು ಹಾಲ್ ನಿರ್ಮಾಣ ಮಾಡಬೇಕೆಂಬ  ಮಹದಾಸೆ. ಭಗವಂತನ ಕೃಪೆಯಿಂದ ಅದು ನೆರವೇರಿದೆ. ಬರುವ ನವಂಬರ್ ೨ ರಂದು "ಈಶಾವಾಸ್ಯಮ್"  ಪ್ರವೇಶೋತ್ಸವವು ನಿಶ್ಚಯ ವಾಗಿದೆ. ಅಷ್ಟರಲ್ಲಿ ಅನಾಯಾಸವಾಗಿ ಲಭ್ಯವಾದ ಅವಕಾಶವನ್ನು ಉಪಯೋಗಿಸಿಕೊಳ್ಳ ಬಾರದೇಕೆ?  ಎಂಬ ಆಲೋಚನೆಯ ಪರಿಣಾಮ , ನಿನ್ನೆ ವಿಜಯದಶಮಿಯ ಶುಭ ದಿನ ದಂದು ಒಂದು  ದಿಢೀರ್ ಸತ್ಸಂಗವು ಅದೇ ಹಾಲ್ ನಲ್ಲಿ ನಡೆಯಿತು.  ಹಾಸನದ  ಶಂಕರ ಮಠಕ್ಕೆ ಪ್ರವಚನಕ್ಕಾಗಿ ಆಗಮಿಸಿದ್ದ ಬೆಂಗಳೂರು ಜೆ.ಪಿ.ನಗರ ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರನ್ನು ನಮ್ಮ ನಿರ್ಮಾಣ ಹಂತದ ಸತ್ಸಂಗದ ಹಾಲ್ ಗೆ ಆಹ್ವಾನಿಸಿದೆ. ಪೂಜ್ಯರು ಸಂತೋಷದಿಂದ ಆಗಮಿಸಿ ಸತ್ಸಂಗವನ್ನು ನಡೆಸಿ ಕೊಟ್ಟರು. ಅದರ ಕೆಲವು ದೃಶ್ಯಗಳು ಇಲ್ಲಿವೆ. 

ಶನಿವಾರ, ಅಕ್ಟೋಬರ್ 1, 2011

ವಿಶ್ವದ ಯಾವ ಯಾವ ದೇಶದಿಂದ ಭೇಟಿ ನೀಡಿದ್ದಾರೆಂಬ ಮಾಹಿತಿ.

ನನಗೆ ಆಶ್ಚರ್ಯ ಆಗ್ತಾ ಇದೆ!  ನನ್ನ ಕುಟುಂಬ ದ ಬ್ಲಾಗನ್ನೂ   ಕೂಡ ವಿಶ್ವದ ಹಲವಾರು ದೇಶಗಳಲ್ಲಿ ನೋಡ್ತಾರೆ! ಹೋಗಲೀ, ಏನೋ ಅಚಾನಕ್ ಆಗಿ ಇಲ್ಲಿ ಬಂದರು, ಅನ್ನುವಂತಿಲ್ಲ. ಕಾರಣ ಇಂಗ್ಲೆಂಡ್ ಮತ್ತು ಅಮೇರಿಕಾ ದೇಶಗಳಲ್ಲಿ ಸಾಮಾನ್ಯವಾಗಿ ನಿತ್ಯವೂ ನೋಡುತ್ತಿದ್ದಾರೆ. ಅಂದರೆ ಬಹುಪಾಲು ಕನ್ನಡಿಗರು, ಅದರಲ್ಲೂ ನಮ್ಮ ಸಂಬಂಧಿಕರೂ ಇರಬಹುದು. ಅಥವಾ ಇಂತಾ ವಿಚಾರಗಳಲ್ಲಿ ಆಸಕ್ತರು ಇರಬಹುದು. ನಾನು ಅಂತವರಲ್ಲಿ ಒಂದು ವಿನಂತಿ ಮಾಡಿಕೊಳ್ಳುವೆ. ದಯಮಾಡಿ ವೇದಸುಧೆಗೆ ನಿಮ್ಮ ಪರಿಚಯ ಮಾಡಿಕೊಡಿ. ಒಂದು ಮೇಲ್ ಮಾಡಿ. ಇಲ್ಲಿ ನೋಡಿ ವಿಶ್ವದ ಯಾವ ಯಾವ ದೇಶದಿಂದ ಭೇಟಿ ನೀಡಿದ್ದಾರೆಂಬ ಮಾಹಿತಿ. 
ಭಾರತ
2599
ಬ್ರಿಟನ್/ಇಂಗ್ಲೆಂಡ್
284
ಅಮೇರಿಕಾ ಸಂಯುಕ್ತ ಸಂಸ್ಥಾನ
169
ಮಲೇಶಿಯಾ
53
ಆಸ್ಟ್ರೇಲಿಯ
36
ಕೆನಡಾ
23
ಸಂಯುಕ್ತ ಅರಬ್ ಎಮಿರೇಟಸ್
22
ಜರ್ಮನಿ
15
ದಕ್ಷಿಣ ಕೋರಿಯಾ
15
ರಶಿಯಾ
11

ಮಂಗಳವಾರ, ಸೆಪ್ಟೆಂಬರ್ 13, 2011

ವೇದಸುಧೆ ಡಾಟ್ ಕಾಂ

ಪ್ರಿಯ ಬಂಧುಗಳೇ 

"ನೆಮ್ಮದಿಗಾಗಿ " ಎಂಬ ಬ್ಲಾಗ್ ನಿಂದ ಆರಂಭಗೊಂಡ ನನ್ನ ಅಂತರ್ ಜಾಲ ಯಾತ್ರೆ  ಮುಂದುವರೆದಂತೆ ಸಂಪದದಲ್ಲಿ ಈಜಾಡಿ, "ವೇದಸುಧೆಯ "  ಆರಂಭಕ್ಕೆ ಕಾರಣವಾಗಿ  "ನಮ್ಮೂರು ನಮ್ಮನೆ"  ನಮ್ಮ  ಕೌಟುಂಬಿಕ  ಸಾಮರಸ್ಯಕ್ಕಾಗಿ ಶುರುವಾಗಿ  ಇದೀಗ   ಸ್ವಂತ ವೆಬ್ ಸೈಟ್  ಹೊಂದುವ ಹಂತ ತಲುಪಿದೆ. 
ಹೊಸದಾದ ಸ್ವಂತ ತಾಣ    vedasudhe.com  [ ವೇದಸುಧೆ ಡಾಟ್ ಕಾಂ] ಆರಂಭಗೊಂಡಿದೆ. ಇನ್ನೆರಡು ತಿಂಗಳಲ್ಲಿ  ನಮ್ಮ ಮನೆಯ ಗೃಹ ಪ್ರವೇಶ ಕಾರ್ಯಕ್ರಮಗಳು ಮುಗಿದ ಮೇಲೆ ಅದರ ಬೆಳವಣಿಗೆಯ ಬಗ್ಗೆ   ಚಿಂತನ ಮಂಥನ ನಡೆಸಲಾಗುವುದು. ಮಿತ್ರ  ಪ್ರಸನ್ನ ಶಂಕರಪುರ  ಅದಕ್ಕೊಂದು ರೂಪ ಕೊಡುತ್ತಿದ್ದಾರೆ. ನೀವು ತಾಣವನ್ನು ಭೇಟಿಯಾಗಿ ನಿಮ್ಮ ಅನಿಸಿಕೆ ಹಂಚಿಕೊಳ್ಳಬಹುದು  

ಸುದ್ಧಿ! ಶುದ್ಧಿ!

ಈ ಸಮಾಜವೇ ಹಾಗೆ
ಕೆಲವರನ್ನು ಹೀರೋ ಮಾಡಿಬಿಡುತ್ತದೆ ಅವರಲ್ಲಿ ಏನಿಲ್ಲದಿದ್ದರೂ!
ಹಲವರು ಇವರ ಕಣ್ಣಿಗೆ ಬೀಳುವುದೇ ಇಲ್ಲ  ಅವರಲ್ಲೆಲ್ಲಾ ಇದ್ದರೂ !!

 ಬಡ   ಬೋರೆ ಗೌಡನಿಗೆ  ತಿಂಗಳೆಲ್ಲಾ ಉಪವಾಸ
ಬೇಡ ನಮಗೆ ಅವನ ಸಹವಾಸ!
ಇಲ್ಲೊಬ್ಬ ಗಾಂಧೀ ಪ್ರತಿಮೆ ಎದಿರು ದಿನವೊಂದು ಕಳೆದು 
ಮಾಡಿದ ಉಪವಾಸ , ಅದೊಂದು ಪುಟಕ್ಕೆ ಸೇರಿದ ಇತಿಹಾಸ!

ಅವನಿಗೆ ಹೊಟ್ಟೆಗೆ ಸಿಗಲಿಲ್ಲ!
ಇವನಿಗೆ ಬೊಜ್ಜು ಕರಗಲಿಲ್ಲ!

ಲಕ್ಷಾಂತರ ಜನರ ಕೊಂಡೊಯ್ಯುವ ಬಸ್ಸುಗಳು ಆಗುವುದಿಲ್ಲ ಸುದ್ಧಿ!
ಮರಕ್ಕೆ ಡಿಕ್ಕಿ ಹೊಡೆದು ಒಬ್ಬನ ಕಾಲ್ಮುರಿದ ಬಸ್ಸಿನದೆ ಪತ್ರಿಕೆಯ ತುಂಬಾ ಸುದ್ಧಿ!!

ನೀವು ಸುದ್ಧಿಯಾಗಬೇಕೆ
ಶುದ್ಧಿ ಯಾಗಬೇಕೆ?
ಅದು ನಿಮಗೆ ಸೇರಿದ್ದು!!


ಸೋಮವಾರ, ಸೆಪ್ಟೆಂಬರ್ 5, 2011

ಹಬ್ಬದ ಸಡಗರ


ಹರಿಹರಪುರದಲ್ಲಿ ದುರ್ಗಾ ಪರಮೇಶ್ವರಿ ಸಿಡಿ ಜಾತ್ರೆ, ಗೌರಿ ಗಣೇಶನ ಹಬ್ಬ ಬಂದರೆ ಊರಿನ ಎಲ್ಲಾ ಗಂಡುಮಕ್ಕಳು, ಹಾಗೂ ಮದುವೆಯಾಗಿ ಹೋದ ಹೆಣ್ಣು ಮಕ್ಕಳು ಊರಿಗೆ ಬಂದೇ ಬರುತ್ತಾರೆ.  ನಾಳೆ ಜಾತ್ರೆ  ಆಥವಾ ಹಬ್ಬ ಎಂದರೆ ಹಿಂದಿನ ದಿನ ರಾತ್ರಿ ಎಲ್ಲರೂ ಅವರವರ ಮನೆಗೆ ಬಂದಿರುತ್ತಾರೆ.  ಮರು ದಿನ ಬೆಳಿಗ್ಗೆ ಎಲ್ಲರಿಗೂ ಯಾರ‍್ಯಾರು ಬಂದಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ.  ಮೊದಲು ದತ್ತ, ಪ್ರಸಾದಿ ಹಿರಣ್ಣ ಬೆಳಿಗ್ಗೆ ೭ ಗಂಟೆಗೆ ನಮ್ಮ ಮನೆಗೆ ಹಾಜರ್.  ನಮ್ಮ ಮನೆಯಲ್ಲೆಲ್ಲಾ ಇನ್ನೂ ಮಲಗಿದ್ದರೆ, ಹಾಸಿಗೆ ಹತ್ತಿರನೇ ಕುಳಿತು ಯಾವಾಗ ಬಂದ್ಯೋ ಶ್ರೀಕಂಠಮೂರ್ತಿ, ಎಷ್ಟು ಹೊತ್ತಿಗೆ ಬಂದೆ ಎಂದು ಮಾತನಾಡುವಿಕೆ. ಎಷ್ಟೊಂದು ಆತ್ಮೀಯತೆ, ಎಷ್ಟೊಂದು ಸಲಿಗೆ,  ಇಲ್ಲಿ ಅಧಿಕಾರ ಹಾಗೂ ಅಂತಸ್ತು ಗೌಣವಾಗುತ್ತದೆ.  ಶಾಮಣ್ಣ, ರಾಮಪ್ರಸಾದ್ ನೀವು ಎಷ್ಟು ಹೊತ್ತಿಗೆ ಬಂದ್ರಿ ಎಂದು ಕೇಳುವುದು.  ಒಂದು ಹತ್ತು ನಿಮಿಷ ಮಾತನಾಡಿ, ಆಮೇಲೆ ಬರುತ್ತೇನೆ ಇನ್ನು ಯಾರ‍್ಯಾರು ಬಂದಿದ್ದಾರೆ ನೋಡುತ್ತೇನೆ ಎಂದು ಹೊರಟಾಗ ನಮ್ಮ ಅತ್ತೆ ಅಡಿಗೆಮನೆಯಿಂದ,  ದತ್ತ ಸ್ವಲ್ಪ ಇರು ಕಾಫಿ ಕುಡಿದುಕೊಂಡು ಹೋಗುವಿರಂತೆ ಎಂದು ಹೇಳುವುದು ಇವೆಲ್ಲಾ ಸಾಮಾನ್ಯವಾಗಿ ನಡೆಯುವ ದೃಶ್ಯ.  ನಮ್ಮ ಅತ್ತೆ ಕಾಫಿ ತುಂಬಾ ರುಚಿಯಾಗಿ ಮಾಡುತ್ತಾರೆ.  ಜಾತ್ರೆಯ ಸಮಯದಲ್ಲಿ  ಊರಿನಲ್ಲೆಲ್ಲಾ ಸಂಭ್ರಮ.  ಎಲ್ಲರ ಮನೆಯಲ್ಲೂ ಜನ.  ನಮ್ಮ ಮನೆಯಲ್ಲಿಯೂ ಸಹ  ಎಲ್ಲರೂ ಸ್ನಾನ ಕಾಫಿ ಮುಗಿಸಿ ಇವರೆಲ್ಲರೂ ಒಂದು ಸುತ್ತು ಎಲ್ಲರ ಮನೆಗೂ ಹೊರಡುತ್ತಾರೆ.  ಯಾರ ಮನೆಯಲ್ಲಿ ತಿಂಡಿ ಆಗಿರುತ್ತೋ  ಅಲ್ಲೇ ತಿಂಡಿ.  ಹರಿಹರಪುರದ ಸ್ಪೆಷಲ್ ತಿಂಡಿ ಅಂದರೆ  ರೊಟ್ಟಿ, ಚಟ್ನಿ, ತುಪ್ಪ, ಮೊಸರು ಅಥವಾ ಇಡ್ಲಿ, ಚಟ್ನಿ, ತುಪ್ಪ ಮೊಸರು.  ತುಂಬಾ ಚೆನ್ನಾಗಿರುತ್ತದೆ.

 ಈ ತರಹದ ಸಂಬಂಧಗಳು ಈಗಲೂ ಹರಿಹರಪುರದಲ್ಲಿ ಉಳಿದಿದೆ.


                            ವಿಜಯ ಶ್ರೀಕಂಠಮೂರ್ತಿ





ಸೋಮವಾರ, ಆಗಸ್ಟ್ 8, 2011

ಪರಿಚಯ -1

ಹಿಂದೆ ಬ್ಲಾಗಿನಲ್ಲಿ ಬರೆಯುವಾಗ ಹರಿಹರಪುರದಲ್ಲಿ ನಮಗೆ ಆತ್ಮೀಯರಾದ ಬಂಧುಗಳನ್ನು ಪರಿಚಯಿಸುತ್ತೇನೆ ಎಂದು ಬರೆದಿದ್ದೆನು. . . . ಮುಂದುವರೆಸುತ್ತಾ

ನಮ್ಮ ಅತ್ತೆಯವರ ಅಣ್ಣ ಹರಿಹರಪುರದ ದಿ. ನಂಜಪ್ಪನವರದ್ದು ತುಂಬು ಸಂಸಾರ. ಇವರು ಏಳು ಹಳ್ಳಿ ಶಾನುಭೋಗರಾಗಿದ್ದರಂತೆ. ಸದಾ ಅವರ ಮನೆಯಲ್ಲಿ ಜನ, ಆಳುಗಳು ತುಂಬಿರುತ್ತಿದ್ದರಂತೆ. ಸಮೃದ್ಧಿ ಕಾಲ. ಹರಿಹರಪುರಕ್ಕೆ ಯಾರೇ ಬಂದರೂ ಇವರ ಮನೆಯಲ್ಲಿ ವಾಸ್ತವ್ಯ. ಇವರು ಈಗ ದಿವಂಗತರಾಗಿದ್ದಾರೆ. ಅವರ ಹಿರಿಯ ಮನಾದ:

೧) ಶ್ರೀಕಂಠಯ್ಯ:

ಅಂದರೆ ನಮ್ಮ ಮನೆಯವರ ಸೋದರಮಾವನ ಮಗ. ಇವರು ವೃತ್ತಿಯಲ್ಲಿ ಹೈಸ್ಕೂಲ್‌ನಲ್ಲಿ ಮುಖ್ಯೋಪಾಧ್ಯಾರಾಯರಾಗಿ ನಿವೃತ್ತಿ ಹೊಂದಿರುತ್ತಾರೆ. ಹಾಲಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಧರ್ಮಪತ್ನಿ ಮಂಜುಳ. ಇವರಿಗೆ ಮೂರು ಜನ ಹೆಣ್ಣುಮಕ್ಕಳು. ಕೊನೆಯ ಮಗಳಿಗೆ ಇದೇ ಆಗಸ್ಟ್-೧೫ ರಂದು ಮದುವೆ ನಡೆಯಲಿದೆ.

ಇವರ ವ್ಯಕ್ತಿತ್ವ ಬಹಳ ದೊಡ್ಡದು. ತುಂಬು ಸಂಸಾರದಲ್ಲಿ ಬೆಳೆದ ಇವರಿಗೆ ಬಹಳ ದೊಡ್ಡ ಗುಣವಿದೆ. ಹಿರಿಯ ಮಗನಾಗಿ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ನಮ್ಮ ಮನೆಯವರೂ ಸಹ ಓದುವ ಕಾಲದಲ್ಲಿ ಇವರ ಮನೆಯಲ್ಲಿ ಇದ್ದರಂತೆ. ಶ್ರೀಕಂಠಿ ಅವರ ತಮ್ಮಂದಿರಿಗೆ ಏನು ತಂದರೂ ಸಹ ಇವರಿಗೂ ತಂದುಕೊಡುತ್ತಿದ್ದರಂತೆ. ಇವರಿಗೆ ಎಲ್ಲಾ ಸಂಬಂಧಿಕರು ಬೇಕು. ಊರಲ್ಲಿ ಯಾರದೇ ಮನೆಯಲ್ಲಿ ಮದುವೆ ಮುಂಜಿ ಇತರೆ ಕಾರ್ಯಕ್ರಮ ನಡೆಯಲಿ ಮುಂದೆ ನಿಂತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ಎಲ್ಲರ ಮನೆಯ ಕಾರ್ಯಕ್ರಮಗಳಿಗೂ ಬರುತ್ತಾರೆ. ಹರಿಹರಪುರಕ್ಕೆ ನಾವುಗಳು ಹೋದರೆ ಮೊದಲು ಇವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರಬೇಕು. ಆ ತರಹದ ಒಂದು ಆತ್ಮೀಯತೆ ಇಟ್ಟುಕೊಂಡಿದ್ದಾರೆ. ಇವರನ್ನು ನಾವೆಲ್ಲರೂ ಹಿರಿಯ ಸ್ಥಾನದಲ್ಲಿಟ್ಟುಕೊಂಡು ಗೌರವಯುತವಾಗಿ ನಡೆದುಕೊಳ್ಳುತ್ತೇವೆ.

ಇದೇ ತರಹ ಸಂಬಂಧ ಮುಂದುವರೆಯಲಿ ಎಂದು ನಮ್ಮ ಅನಿಸಿಕೆ.

೨) ದತ್ತಾತ್ರಿ:

ಇವರು ದಿವಂಗತ ನಂಜಪ್ಪನವರ ಮಗಳ ಮಗ. ಅಂದರೆ ನಮ್ಮ ಮನೆಯವರಿಗೆ ಸೋದರಮಾವನ ಮಗಳ ಮಗ. ಆದರೆ ನಮ್ಮ ಮನೆಯವರಿಗೆ ಸ್ವಂತ ತಮ್ಮನಷ್ಟು ಸಲಿಗೆ. ಇವರು ವೃತ್ತಿಯಲ್ಲಿ ಕೆ.ಇ.ಬಿ.ಯಲ್ಲಿ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಸ್ವಯಂ ನಿವೃತ್ತಿ ಪಡೆದುಕೊಂಡು ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾರೆ. ಇವರ ವ್ಯಕ್ತಿತ್ವ ಬಹಳ ದೊಡ್ಡದು. ಇವರು ತಮ್ಮ ಮನೆಯ ಎಲ್ಲಾ ಜವಾಬ್ದಾರಿಯನ್ನು ಮುಗಿಸಿ ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಎಲ್ಲರ ಕಷ್ಟಸುಖಗಳಿಗೂ ಸ್ಪಂಧಿಸುವ ವ್ಯಕ್ತಿ. ಆ ಒಂದು ದೊಡ್ಡಗುಣ ಎಲ್ಲರಿಗೂ ಬರುವುದಿಲ್ಲ. ಬಹಳ ಬುದ್ಧಿವಂತ. ಉನ್ನತ ಹುದ್ದೆಯಲ್ಲಿ ಇದ್ದೀನೆಂಬ ಅಹಂ ಇಲ್ಲ. ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಾರೆ. ನಮ್ಮ ಸಂಸಾರಕ್ಕಂತೂ ಬಹಳ ಹತ್ತಿರ, ಸಲುಗೆ. ಶಿವಮೊಗ್ಗಗೆ ಬಂದರೆ ನಮ್ಮ ಮನೆಯಲ್ಲೇ ಉಳಿಯುವುದು. ಹಿಂದೆ ಇವರಿಬ್ಬರೂ ತಮ್ಮ ವಿದ್ಯಾಭ್ಯಾಸದ ಕಾಲದಲ್ಲಿ ಕಷ್ಟಪಟ್ಟಿದನ್ನು ನೆನಪಿಸಿಕೊಳ್ಳುತ್ತಾರೆ. ತಂಗಿಯರ ಮದುವೆ ಮಾಡುವಾಗ ಎಷ್ಟು ಕಷ್ಟ ಪಟ್ಟೆವು ಎಂದು ಒಬ್ಬರಿಗೊಬ್ಬರು ಹೇಳಿಕೊಂಡು ಹಿಂದಿನದೆಲ್ಲವನ್ನೂ ನೆನಪಿಸಿಕೊಳ್ಳುತ್ತಾ, ಎಲ್ಲರೂ ಅವರವರ ಪಾಡಿಗೆ ಸಂಸಾರ ಮಾಡಿಕೊಂಡು ಚೆನ್ನಾಗಿದ್ದಾರೆ. ನಾವು ಆಗ ಕಷ್ಟಪಟ್ಟಿದ್ದಕ್ಕೆ ಈಗ ದೇವರು ನಮ್ಮನ್ನು ಚೆನ್ನಾಗಿಟ್ಟಿರುವುದರಿಂದ ಎಲ್ಲರ ಕಷ್ಟಸುಖಗಳಿಗೆ ಭಾಗಿಯಾಗೋಣ ಎಂದು ಮಾತನಾಡಿಕೊಳ್ಳುತ್ತಾರೆ.

ಇವರ ಸಂಬಂಧವೂ ಸಹ ನಮ್ಮ ಜೊತೆ ಇದೇ ರೀತಿ ಮುಂದುವರೆಯಲಿ ಎಂದು ನಮ್ಮ ಅನಿಸಿಕೆ.

೩)ಕುಮಾರ:

ಕುಮಾರ ನಮ್ಮ ಅತ್ತೆಯವರ ತಮ್ಮನ ಮಗ ಅಂದರೆ ನಮ್ಮ ಮನೆಯವರ ಸೋದರಮಾವ ಪಾಪಣ್ಣನವರ ಮಗ. ಇವನು ಇನ್ನೂ ಚಿಕ್ಕ ವಯಸ್ಸಿನವನು. ಆದರೂ ಜವಾಬ್ದಾರಿಯುತ ಮಗ. ಅಪ್ಪ ಅಮ್ಮನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ನನಗಂತೂ ಸ್ವಂತ ತಮ್ಮನಷ್ಟು ಸಲಿಗೆ. ನಾವು ಹಾಗೂ ಕುಮಾರ, ಹರಿಹರಪುರದಲ್ಲಿ ಅಥವಾ ಬೇರೆ ಸಂಬಂಧಿಕರ ಮದುವೆ ಹಾಗು ಮುಂಜಿ ಕಾರ್ಯಕ್ರಮಗಳನ್ನು ಸಾಮಾನ್ಯವಾಗಿ ತಪ್ಪಿಸುವುದಿಲ್ಲ. ಇಬ್ಬರೂ ಹಾಜರ್. ಹಾಲಿ ಬೆಂಗಳೂರಿನಲ್ಲಿ ವಾಸಾಗಿದ್ದಾನೆ. ಹರಿಹರಪುರಕ್ಕೆ ಬಂದಾಗ ನನ್ನ ನಾದಿನಿ ಮಂಗಳ ಅಂತೂ ಅಳೀಮಯ್ಯ ಏನು ಸಮಾಚಾರ, ಕಾಫಿ ಕುಡಿದುಕೊಂಡು ಹೋಗು ಅಂತ ಮಾತನಾಡಿಸುತ್ತಾಳೆ. ಕಾಫಿ ಕುಡಿಯುವುದಕ್ಕೆ ನಿಮ್ಮನೆಗೆ ಬಂದಿರುವುದು ಅಂತ ನೇರ ಅಡಿಗೆಮನೆಗೆ ಬಂದು ನಮ್ಮ ಅತ್ತೆಯವರ ಹತ್ತಿರ ಕಾಫಿ ಇಸಿದುಕೊಂಡು ಕುಡಿದು ಹೋಗುವ ಅಭ್ಯಾಸ. ಕುಮಾರನೂ ಸಹ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಸಹ ಸ್ವಂತ ಮನೆಯವರ ತರ ಓಡಾಡಿಕೊಂಡು ಕೆಲಸ ಮಾಡುತ್ತಾನೆ. ಎಲ್ಲರೊಡನೆ ಹೊಂದಿಕೊಂಡು ಹೋಗುವ ಸ್ವಭಾವ.

ಇವನ ಸಂಬಂಧವೂ ಸಹ ನಮ್ಮ ಜೊತೆ ಇದೇ ರೀತಿ ಮುಂದುವರೆಯಲಿ ಎಂದು ನಮ್ಮ ಅನಿಸಿಕೆ.

೪) ಲಕ್ಷ್ಮೀ ನಾಗೇಶ್( ಸುಬ್ಬಣ್ಣ):

ಇವರು ಹರಿಹರಪುರದ ನರಸಮ್ಮ ನಾಗರಾಜಯ್ಯ ಇವರ ಹಿರಿಯ ಮಗ ( ಅಂದರೆ ಶ್ರೀಧರ್ ಅವರ ಅಣ್ಣ) ಹಾಗೂ ನಮ್ಮ ಮನೆಯವರ ಸ್ನೇಹಿತ. ಇಬ್ಬರೂ ಒಟ್ಟಿಗೆ ಓದಿದವರು. ಇವರೂ ಸಹ ಓದುವಾಗ ಬಹಳ ಕಷ್ಟಪಟ್ಟು ಮುಂದೆ ಬಂದು ಒಂದು ಸರ್ಕಾರಿ ನೌಕರಿ ಹಿಡಿದು ಹಾಲಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಸ್ವಭಾವತ: ನೇರ ನುಡಿ. ಅಂತರಂಗದಲ್ಲಿ ಕಲ್ಮಶವಿಲ್ಲ. ಇವರನ್ನು ಕಂಡರೆ ಏನೋ ಒಂದು ತರಹದ ಗೌರವ ಭಾವನೆ ಮೂಡುತ್ತದೆ. ನಮ್ಮ ಮನೆಯವರ ಹತ್ತಿರ ಆತ್ಮೀಯವಾಗಿ ಮನಬಿಚ್ಚಿ ಮಾತನಾಡುತ್ತಾರೆ.

ಇವರ ಸಂಬಂಧವೂ ಸಹ ನಮ್ಮ ಜೊತೆ ಇದೇ ರೀತಿ ಮುಂದುವರೆಯಲಿ ಎಂದು ನಮ್ಮ ಅನಿಸಿಕೆ.

- ವಿಜಯ ಶ್ರೀಕಂಠಮೂರ್ತಿ

ಭಾನುವಾರ, ಜುಲೈ 24, 2011

ಸಾಧನಾ ಪಂಚಕಮ್-ಭಾಗ -12


ಆತ್ಮೀಯ ಬಂಧುಗಳೇ, ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾಪಂಚಕಮ್ ಕೃತಿಯ ಬಗ್ಗೆ ತಿಪಟೂರು ಚಿನ್ಮಯಾ ಮಿಶನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಉಪನ್ಯಾಸದ ಎಲ್ಲಾ ಧ್ವನಿ ಕ್ಲಿಪ್ ಗಳನ್ನೂ ಕಳೆದ ಮೂರು ವಾರಗಳಿಂದ ಪ್ರಕಟಿಸುತ್ತಾ ಇಂದು ಕೊನೆಯ ಕಂತನ್ನು ಪ್ರಕಟಿಸಲಾಗಿದೆ. ಅಧ್ಯಾತ್ಮಪಥದಲ್ಲಿ ಸಾಗುತ್ತಿರುವ ಸಾಧಕರಿಗಂತೂ ಬಹಳ ಉತ್ತಮವಾದ ಜೀವನ ಸೂತ್ರಗಳು ಸಾಧನಾ ಪಂಚಕಮ್ ಉಪನ್ಯಾಸದಲ್ಲಿ ಲಭ್ಯ. ಹಾಗಂದು ಸಾಮಾನ್ಯ ಲೌಕಿಗರಿಗೆ ಇದು ಬೇಡವೇ? ಶ್ರದ್ಧೆಯಿಂದ ಈ ಉಪನ್ಯಾಸ ಮಾಲಿಕೆಯನ್ನು ಕೇಳಿನೋಡಿ. ನಿಮ್ಮ ಹಲವು ಸಮಸ್ಯೆಗಳಿಗೆ ಇಲ್ಲಿ ಉತ್ತರವಿದೆ.ಆದ್ದರಿಂದ ಸಾಧನಾ ಪಂಚಕಮ್ ಉಪನ್ಯಾಸ ಮಾಲಿಕೆ ಇಂದಿಗೆ ಮುಗಿದರೂ ಅದನ್ನು ಯಾವಾಗ ಬೇಕಾದರೂ ಕೇಳಲು ಯೋಗ್ಯವಾಗಿದೆ. ನೀವು ಮಾಡಬೇಕಾದುದು ಇಷ್ಟೆ.ಬ್ಲಾಗಿನ ಎಡಬದಿಯಲ್ಲಿ "ಮಾಲಿಕೆಗಳು" ಎಂಬ ತಲೆಬರಹವಿದೆ. ಅದರಡಿಯಲ್ಲಿರುವ "ಸಾಧನಾ ಪಂಚಕಮ್" ಮೇಲೆ ಕ್ಲಿಕ್ ಮಾಡಿದರೆ ಅಷ್ಟೂ ಉಪನ್ಯಾಸದ ಕ್ಲಿಪ್ ಗಳು ನಿಮಗೆ ಕೇಳಲು ಲಭ್ಯವಾಗುತ್ತವೆ. ಅದರ ಉಪಯೋಗವನ್ನು ಎಲ್ಲರೂ ಪಡೆದರೆ ನಮ್ಮ ಪ್ರಯತ್ನ ಸಾರ್ಥಕವಾದೀತು.
------------------------------------------
ಸಾಧನಾ ಪಂಚಕಂ -ಮೆಟ್ಟಲು- 37+38+39+40
37. ಪ್ರಾಕ್ಕರ್ಮ ಪ್ರವಿಲಾಪ್ಯತಾಮ್
-ಸಂಚಿತ ಕರ್ಮಗಳ ಫಲವನ್ನು ಅನುಭವಿಸು
38. ಚಿತಿಬಲಾನ್ನಾಪ್ಯುತ್ತರೈ: ಶ್ಲಿಷ್ಯತಾಮ್
ಹಾಗೆಯೇ ಮನೋಬಲದಿಂದ ಭವಿಷ್ಯ ಬಗ್ಗೆಯೂ ಆತಂಕ ಪಡದಿರು
39. ಪ್ರಾರಬ್ಧಂ ತ್ವಿಹ ಭುಜ್ಯತಾಮ್
ಪ್ರಾರಬ್ಧ ಕರ್ಮಗಳನ್ನು ಇಲ್ಲಿ ಅನುಭವಿಸು.
40. ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್
-ಅನಂತರ ಬ್ರಹ್ಮಾನುಭವದಲ್ಲಿ ಸ್ಥಿತನಾಗಿರು.

ಶನಿವಾರ, ಜುಲೈ 23, 2011

ಶ್ರೀ ಜೇಸುದಾಸ್ ರಿಂದ ಹರಿವರಾಸನಮ್

ಸಾಧನಾ ಪಂಚಕಮ್-ಭಾಗ -11

35. ಪೂರ್ಣಾತ್ಮಾ ಸುಸಮೀಕ್ಷತಾಮ್
ಸರ್ವವ್ಯಾಪಿಯಾಗಿರುವ ಆತ್ಮನನ್ನು ದರ್ಶಿಸು
36. ಜಗದಿದಂ ತದ್ಬಾಧಿತಂ ದೃಶ್ಯತಾಮ್
ಕ್ಷಣ ಭಂಗುರದ ಜಗತ್ತು ನಮ್ಮ ಮನಸ್ಸಿನ ಭ್ರಮೆ ಎಂಬುದನ್ನು ಮನಗಾಣು

ಶುಕ್ರವಾರ, ಜುಲೈ 22, 2011

ಇಲ್ಲಿ ಮಾತನಾಡಬೇಕು

ಆತ್ಮೀಯ ಬಂಧುಗಳೇ,
ನನ್ನೊಡನೆ ಬರೆಯಲು ಶ್ರೀಮತಿ ವಿಜಯ ಶ್ರೀಕಂಠಮೂರ್ತಿ ಮತ್ತು ಹಿರಿಯರಾದ ಕವಿನಾಗರಾಜ್ ಜೊತೆಗಿದ್ದಾರೆ. ನಾನು ಗಮನಿಸಿದಂತೆ ಕಳೆದ ಒಂದುತಿಂಗಳಿಂದೀಚೆಗೆ ಸುಮಾರು ಒಂದು ಸಹಸ್ರಕ್ಕೂ ಹೆಚ್ಚು ಜನರು ಬ್ಲಾಗಿಗೆ ಬೇಟಿಕೊಟ್ಟಿದ್ದಾರೆ.ನಮ್ಮ ಬಂಧುಗಳಲ್ಲದ ಅನೇಕ ಅಭಿಮಾನಿಗಳೂ ಭೇಟಿ ಕೂಟ್ಟಿರಬಹುದು. ನಮ್ಮ ಬಂಧುಗಳು ಇಲ್ಲಿ ಮಾತನಾಡಬೇಕು. ಕನಿಷ್ಟ ಪಕ್ಷ ಒಂದು ಕಾಮೆಂಟ್ ಆದರೂ ಮಾಡಬೇಕು. ಕ್ಷೇಮ ಸಮಾಚಾರ ತಿಳಿಸಬೇಕು. ಕನ್ನಡದಲ್ಲಿ ಬರೆಯಲು ಬಾರದವರಿಗಾಗಿ ಕನ್ನಡ ಸ್ಲೇಟ್ ಕೊಟ್ಟಿರುವೆ. ಅದರೊಟ್ಟಿಗೆ ಯಾವ ಕನ್ನಡ ಅಕ್ಷರಕ್ಕೆ ಯಾವ ಇಂಗ್ಳೀಶ್ ಅಕ್ಷರ ಕುಟ್ಟಬೇಕೆಂಬ ಪಟ್ಟಿಯೂ ಇದೆ.ವಿಜಯ ಅವರಂತ ಮಹಿಳೆಯೊಬ್ಬರು ತಮ್ಮ ಕಛೇರಿ ಕೆಲಸಗಳು ಮತ್ತು ಗೃಹಕೃತ್ಯದ ಜೊತೆಗೇ ಬ್ಲಾಗ್ ನಲ್ಲಿ ಬರೆಯುವ ಗಂಭೀರ ಪ್ರಯತ್ನ ಮಾಡಿದ್ದಾರೆ.ಅವರು ನಮಗೆಲ್ಲಾ ಸ್ಪೂರ್ತಿಯಾಗಬೇಡವೇ? ಎರಡು ಮಾತು ಬರೆಯಿರಿ ಪ್ಲೀಸ್.

ಧಾವಂತದ ಬದುಕಿನಲ್ಲಿ ಬಡವಾದ ಸಮಾಜ

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ:

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು: ಭಾಗ್ಭವೇತ್||

ಇದು ನಮ್ಮ ಪೂರ್ವಜರು ನಮಗೆ ನೀಡಿರುವ ನಿತ್ಯ ಸಂಕಲ್ಪ.ಇದರ ಅರ್ಥವನ್ನು ಸ್ವಲ್ಪ ನೋಡೋಣ. "ಎಲ್ಲರೂ ಸುಖವಾಗಿರಲಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲಿ.ಯಾರೂ ದು: ಪಡುವುದು ಬೇಡ"

ಎಲ್ಲರೂ ಅಂದರೆ ಯಾರು? ನಮ್ಮ ಮನೆಯ ಎಲ್ಲಾ ಜನರೇ? ನಮ್ಮ ಜಾತಿಯ ಎಲ್ಲಾ ಜನರೇ? ನಮ್ಮ ಊರಿನ ಎಲ್ಲಾ ಜನರೇ? ನಮ್ಮ ಧರ್ಮದ ಎಲ್ಲಾ ಜನರೇ? ಅಥವಾ ಎಲ್ಲಾ ಮನುಕುಲವೇ?.....ನಮ್ಮ ಪೂರ್ವಜರ ಕಲ್ಪನೆ ಕೇವಲ ಮನುಷ್ಯ ರಿಗೂ ಸೀಮಿತಗೊಳ್ಳಲಿಲ್ಲ. ಭೂಮಂಡಲದಲ್ಲಿರುವ ಎಲ್ಲಾ ಜೀವ ಜಂತುಗಳು, ಗಿಡಮರ ಬಳ್ಳಿಗಳೂ ಕೂಡ ಸುಖವಾಗಿರಬೇಕೆಂಬ ಮಹತ್ತರ ಸಂಕಲ್ಪ. ಅಂದರೆ ಅಷ್ಟರ ಮಟ್ಟಿಗೆ ಉದಾರ ನೀತಿ. ಕೇವಲ ಮನುಷ್ಯ ಮಾತ್ರರೇ ಅಲ್ಲದೆ ಸಮಸ್ತ ಜೀವ ಜಂತುಗಳೂ ಸುಖವಾಗಿರಲೆನ್ನುವ ನಮ್ಮ ಪೂರ್ವಜರು ನಮಗೆ ಎಂತಹಾ ಉದಾರವಾದ ಬದುಕುವ ಶೈಲಿ ಕಲಿಸಿಕೊಟ್ಟಿದ್ದಾರಲ್ಲವೇ?

ಅದ್ವೇಷ್ಟಾ ಸರ್ವ ಭೂತಾನಾಮ್ ಮೈತ್ರ: ಕರುಣ ಏವ ....ಎಂದು ಗೀತೆಯು ಸಾರುತ್ತದೆ. ಅಂದರೆ ಏನು? ಯಾರಮೇಲೂ ದ್ವೇಷ ಬೇಡ, ಎಲ್ಲರಲ್ಲೂ ಮೈತ್ರಿ, ಕರುಣೆ ಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳೋಣ.....

ಸಮ: ಶತ್ರೌ ಮಿತ್ರೇ ತಥಾ ಮಾನಾಪಮಾನಯೋ:......

ಶತ್ರು ಮಿತ್ರರನ್ನು ಹಾಗೂ ಮಾನ ಅಪಮಾನಗಳನ್ನು ಸಮಭಾವದಿಂದ ಕಾಣೋಣ.

.........ಇಂತಹ ಸಾಕಷ್ಟು ಪ್ರೇರಣಾ ದಾಯಕ ವಿಚಾರಗಳನ್ನು ವೇದ ಉಪನಿಷತ್ತುಗಳಲ್ಲಿ, ಭಗವದ್ಗೀತೆಯಲ್ಲಿ ನಾವು ಕಾಣ ಬಹುದಾಗಿದೆ......

ಇವೆಲ್ಲಾ ನಮ್ಮ ಧಾರ್ಮಿಕ ಜೀವನಕ್ಕೆ ಪ್ರೇರಣಾದಾಯಕ ಅಂಶಗಳು. ಪರ ಮತವನ್ನು ದ್ವೇಶಿಸು, ಹಿಂದು ವಿಚಾರವನ್ನು ಒಪ್ಪದ ಅಥವಾ ನಮ್ಮ ಧಾರ್ಮಿಕ ಗ್ರಂಥಗಳನ್ನು ಒಪ್ಪದವರು ನರಕಕ್ಕೆ ಹೋಗಬೇಕಾಗುತ್ತದೆಂದು ನಮ್ಮ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಎಲ್ಲೂ ಹೇಳಿಲ್ಲ. ಅಥವಾ ಹಿಂದು ಧಾರ್ಮಿಕ ಗ್ರಂಥಗಳನ್ನು ಓದುವುದರಿಂದ ಮಾತ್ರ ನಿಮಗೆ ಸ್ವರ್ಗ ಸಿಗುತ್ತದೆಂದೂ ಕೂಡ ಎಲ್ಲೂ ಹೇಳಿಲ್ಲ.ಇಷ್ಟು ಭವ್ಯವಾದ ನಮ್ಮ ನೆಲದ ವಿಚಾರಗಳನ್ನು ನಾವು ಪ್ರಚಾರ ಮಾಡಲೇ ಇಲ್ಲವಲ್ಲ! ಇರಲಿ... ನಮ್ಮ ಮಕ್ಕಳಿಗೂ ಕಲಿಸಲಿಲ್ಲವಲ್ಲಾ!

ಈಗಿನ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ನೋಡಿ.ವೃದ್ಧಾಶ್ರಮ ಸೇರುತ್ತಿರುವ ಅಪ್ಪ-ಅಮ್ಮ. ಹೆತ್ತ ಅಪ್ಪ-ಅಮ್ಮನ ಪ್ರೀತಿ ಕಾಣದೆ ಆಯಾಗಳ ಪೋಷಣೆಯಲ್ಲಿ ಯಾಂತ್ರಿಕವಾಗಿ ಬೆಳೆಯುವ ಮಕ್ಕಳು. ಇಂತಹ ಮಕ್ಕಳು ಬೆಳೆದು ದೊಡ್ದವರಾದಂತೆ ಅವರ ಕಣ್ಮುಂದಿನ ಆದರ್ಶವಾದರೂ ಏನು? ಕೈತುಂಬಾ ಸಂಬಳ ಸಿಗುವ ನೌಕರಿ.ಐಶಾರಾಮ ಜೀವನ. ಪ್ರೀತಿ ಪ್ರೇಮ, ಕಾಮದ ದೃಶ್ಯಗಳೇ ತುಂಬಿತುಳುಕುವ ದೂರದರ್ಶನ ದಾರಾವಾಹಿಗಳು! ಅಥವಾ ಕ್ರಿಕೆಟ್ ಆಟಗಳು!! ಕ್ರೈಮ್ ಡೈರಿಯೇ ಮೊದಲಾದ ಅಪರಾಧವನ್ನೇ ವೈಭವೀ ಕರಿಸುವ ದೃಶ್ಯಗಳು. ಇಷ್ಟಕ್ಕಿಂತ ಹೆಚ್ಚು ಚಟುವಟಿಕೆಗಳಿಗೆ ಬಿಡುವೆಲ್ಲಿಂದ ಬರಬೇಕು? ಮನಸ್ಸಿಗೆ ಮುದವನ್ನು ನೀಡಬಹುದಾದ ಪ್ರವಚನಗಳು, ಸಂಗೀತ-ನೃತ್ಯಗಳು, ಕಥೆ ಕಾದಂಬರಿಯನ್ನು ಓದುವ ಹವ್ಯಾಸಗಳು.... ಇವಕ್ಕೆಲ್ಲಾ ಸಮಯ ಎಲ್ಲಿಂದ ಬರಬೇಕು? ಹೀಗೆ ಸಮಾಜವು ದಿಕ್ಕುತಪ್ಪಿ ಧಾವಿಸುತ್ತಿರುವಾಗ ಸಹಜವಾಗಿ ಅಪರಾಧಗಳು, ಹೊಡೆದಾಟ ಬಡಿದಾಟಗಳು, ಕೋಮು ಗಲಭೆಗಳು, ಅಗ್ನಿ ಸ್ಪರ್ಷಗಳು, ಎಲ್ಲವೂ ಕಿಚ್ಚಿನಂತೆ ಹರಡಿ ಬಿಡುತ್ತವೆ. ಇದೆಲ್ಲಾ ಅತಿರೇಕವಾದಾಗ ಅದನ್ನು ನಿರ್ಬಂಧುಸಲು ಸರ್ಕಾರವು ಹೆಣಗುವ ಪರಿಸ್ಥಿತಿ!!

ಹೀಗೆ ಸಾಮಾಜಿಕವಾಗಿ ನೆಮ್ಮದಿ ಹಾಳಾಗುವುದನ್ನು ನಾವು ನೋಡುತ್ತಿರುವಂತೆಯೇ ವೈಯಕ್ತಿಕವಾಗಿಯೂ ಶಾಂತಿ ಇಲ್ಲದ ಜೀವನವನ್ನು ನೋಡುತ್ತಿದ್ದೇವೆ. ಮಾನಸಿಕವಾಗಿ ಶಾರೀರಿಕವಾಗಿಯೂ ಕೂಡ ಸ್ವಾಸ್ಥ್ಯವನ್ನು ಹಾಳುಮಾಡಿಕೊಂಡಿರುವ ಹಲವಾರು ಉಧಾಹರಣೆಗಳನ್ನು ಇಂದಿನ ಪೀಳಿಗೆಯಲ್ಲಿ ಕಾಣಬಹುದಾಗಿದೆ. ಪರಿಸ್ಥಿತಿಗೆ ಕಾರಣ ನಮಗೆ ಅರಿವಾಗಿದೆಯೇ?

ನಮಗೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಾವು ನಮ್ಮ ಮಣ್ಣಿನ ಸಂಸ್ಕೃತಿ ಪರಂಪರೆಯನ್ನು ಮರೆತದ್ದೇ ಇಂದಿನ ವಿಶಮ ಸ್ಥಿತಿಗೆ ಕಾರಣ ಎನಿಸುವುದಿಲ್ಲವೇ? ನಾವು ನಿಜವಾಗಿ ಒಬ್ಬ ಮುಗ್ಧ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಚಿಂತನೆ ಮಾಡಿದಾಗ ನಮ್ಮ ಮಕ್ಕಳ ಭವಿಷ್ಯವು ಮುಸುಕಾಗಿ ನಮಗೆ ಕಾಣುವುದಿಲ್ಲವೇ? ಈ ನೆಲದ ಉದಾರವಾದ ಸಂಸ್ಕೃತಿ ಪರಂಪರೆಯನ್ನು ಬದಿಗಿಟ್ಟು ಈಗಾಗಲೇ ಕೆಟ್ಟಿರುವುದು ಸಾಲದೇ? ಭಗವದ್ಗೀತೆಯ ಸಾರವನ್ನು ತಿಳಿಯದೆ ಅದನ್ನು ವಿರೋಧಿಸುವವರಿಗೆ ಏನೆನ್ನೋಣ? ಇಡೀ ಮನುಕುಲದ ಒಳಿತಿಗಾಗಿ ನಮ್ಮ ಋಷಿಮುನಿಗಳ ತಪ್ಪಸ್ಸಿನ ಫಲವಾಗಿ ಮೂಡಿಬಂದ ಹಿಂದು ಧರ್ಮವನ್ನು ಅನುಸರಿಸುವ ಹಿಂದು ಮತೀಯರಲ್ಲಿಯೇ ಕೆಲವರನ್ನು ಅಲ್ಲಿಂದ ಬೇರ್ಪಡಿಸಿ ಅನ್ಯಮತೀಯ ಗುಂಪುಗಳೊಡನೆ ಸೇರಿಸುವ ಪ್ರಯತ್ನಕ್ಕೆ ಏನೆನ್ನೋಣ?