ಎಂತ ಚಂದದ ಹೂವು
ಹೀಗಿದೇತಕೆ ಬಿತ್ತು?
ಮನದಲಿ ವ್ಯಥೆಯ ಹೊತ್ತು|
ಯಾವ ಬೆರಳದು ಕ್ರೂರ
ಕೊಟ್ಟಿದೇತಕೆ ನೋವ
ಉಗರಲಿ ತೊಟ್ಟ ಕಿತ್ತು||
ನಗುನಗುತಲಿದೆ ಇನ್ನೂ
ಮುಚ್ಚಲಿಲ್ಲವು ಕಣ್ಣು
ಪಾಪ ಅದಕೇನು ಗೊತ್ತು?
ತಾನೀಗ ಕಾಲರಾಯನ ತುತ್ತು||
ಮೆಲ್ಲ ಮೆಲ್ಲನೆ ಮಾಸಿ
ಆವರಿಸಿದೆ ಕಪ್ಪು
ಕರಗುತಿದೆ ಕೊನೆಯ ಕಂತು|
ತನ್ನ ತಾನೇ ಮರೆತು
ಕೊಡುತಲಿದೆ ನೋಡು
ತುಳಿದವರ ಕಾಲಿಗೇ ಮುತ್ತು!!
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ [ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು] ಹರಿಹರಪುರದಲ್ಲಿ ಜನ್ಮ ತಾಳಿರುವ ಎಲ್ಲರಿಗಾಗಿ...ಹಾಗೂ ಅವರ ಬಂಧುಬಳಗಕ್ಕಾಗಿ...
ಮಂಗಳವಾರ, ಜೂನ್ 28, 2011
ತೊಟ್ಟು ಕಿತ್ತ ಹೂ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ