ಗುರುವಾರ, ಜುಲೈ 21, 2011

ಇತಿಹಾಸ ಸಂಶೋಧಕ ಶ್ರೀ ಬಿ.ಎಸ್. ರಾಮಭಟ್ಟರ ಪರಿಚಯ


ನಮ್ಮ ತಂದೆಯವರಾದ ಶ್ರೀ ಬಿ.ಎಸ್. ರಾಮಭಟ್ಟರು ಹರಿಹರಪುರದ ದಿವಂಗತ ಬಿ.ಎನ್.ರಾಮಚಂದ್ರಯ್ಯನವರ ಬೀಗರು. ವಯಸ್ಸು ೮೨ವರ್ಷ . ಬೊಬ್ಬೂರುಕಮ್ಮೆ ಪಂಗಡಕ್ಕೆ ಸೇರಿದವರು. ಇವರ ಮನೆತನಕ್ಕೆ ಏಕಸಂತೆ ಎಂದು ಪ್ರಶಸ್ತಿ ಬಂದಿದೆ. ನಮ್ಮ ತಾಯಿಯವರ ಹೆಸರು ಬಿ. ಆರ್. ನಾಗರತ್ನ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲನೆಯ ಮಗಳು ನಾನು [ಬಿ. ಆರ್. ವಿಜಯ.] ಬಿ.ಎಸ್.ಸಿ. ಪದವೀಧರೆ. ಶಿವಮೊಗ್ಗದ ನೀರಾವರಿ ಇಲಾಖೆಯ ಕೆಲಸ ನಿರ್ವಹಿಸುತ್ತಿದ್ದೇನೆ. ನಮ್ಮ ಮನೆಯವರು ಬಿ. ಆರ್. ಶ್ರೀಕಂಠಮೂರ್ತಿ, ಇವರು ತಹಶೀಲ್ದಾರ್‌ರಾಗಿ ಶಿವಮೊಗ್ಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಎರಡನೆಯ ಮಗಳು ಬಿ. ಆರ್. ಪದ್ಮ., ಇವಳು ಬಿ.ಕಾಂ. ಪದವೀಧರೆ. ಐ.ಜಿ.ಪಿ. ಕಛೇರಿ, ಬೆಂಗಳೂರು ಇಲ್ಲಿ ಕ್ಯಾಷಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ಇವಳ ಮನೆಯವರಾದ ಹೆಚ್,ಎಸ್, ಪದ್ಮನಾಭಜೋಯ್ಸ್ ಇವರು ಡೈರೆಕ್ಟರೇಟ್ ಆಫ್ ಆಯುಷ್, ಬೆಂಗಳೂರು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದಾರೆ.

ನಮ್ಮ ತಂದೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ್ದು, ಸರಕಾರವು ಇವರಿಗೆ ಸ್ವಾತಂತ್ರ್ಯ ಹೋರಾಟಗಾರರ ಗೌರವ ಧನ ನೀಡುತ್ತಿದೆ. ಇವರು ಕ್ಷೇತ್ರ ಕಾರ್ಯಗಳ ಮೂಲಕ ಹಲವಾರು ಐತಿಹಾಸಿಕ ಅವಶೇಷಗಳನ್ನು ಶೋಧಿಸಿ ಇವುಗಳ ಬಗ್ಗೆ ಲೇಖನಗಳನ್ನು ಪ್ರಕಟಿಸಿರುತ್ತಾರೆ. ೮೨ ವರ್ಷಗಳ ವಯಸ್ಸಿನಲ್ಲಿ ಈಗಲೂ ಸಹ ಸಾಹಿತ್ಯ ಮತ್ತು ಐತಿಹಾಸಿಕ ಕ್ಷೇತ್ರದಲ್ಲಿ ನಿರತರು. ದೂರದರ್ಶನದಲ್ಲಿ ಇವರ ಸಂದರ್ಶನಗಳು ನಡೆದಿವೆ. ಭದ್ರಾವತಿ ಆಕಾಶವಾಣಿಯಲ್ಲೂ ಇವರ ಹಲವಾರು ಭಾಷಣಗಳು, ಎರಡು ರೂಪಕಗಳು ಒಂದು ನಾಟಕ ಪ್ರಸಾರವಾಗಿದೆ. ಪಿ.ಹೆಚ್.ಡಿ ವಿದ್ಯಾರ್ಥಿಗಳು ಇತಿಹಾಸದ ಬಗ್ಗೆ ವಿವರ ಪಡೆದುಕೊಳ್ಳಲು ಇವರ ಹತ್ತಿರ ಈಗಲೂ ಬರುತ್ತಿದ್ದಾರೆ. ಅಮೆರಿಕಾದ ಒಬ್ಬಳು ವಿದ್ಯಾರ್ಥಿ ಭಾರತದಲ್ಲಿ ಪಿ.ಹೆಚ್.ಡಿ ಪಡೆಯಲು ಬಂದಿದ್ದು, ಅವರು ನಮ್ಮ ತಂದೆಯವರ ಹತ್ತಿರ ಬಂದು ಇತಿಹಾಸದ ಬಗ್ಗೆ ತಮಗೆ ಬೇಕಾದ ವಿಷಯಗಳನ್ನು ಪಡೆದು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ ಶಾಸನಗಳ ಸಂಗ್ರಹಣಾ ಕಾರ್ಯಗಳನ್ನು ಮಾಡಿರುತ್ತಾರೆ.

ವಿವರಗಳನ್ನು ಹಾಗೂ ಅವರು ಮಾಡಿದ ಸಾಧನೆಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೆಳಗೆ ಹಾಕಿರುತ್ತೇನೆ.
೧ ಹೆಸರು : ಬಿ.ಎಸ್. ರಾಮಭಟ್ಟ
೨ ಶಿಕ್ಷಣ : ಎಂ.ಎ. ಬಿ.ಎಡ್. ಆರ್. ಬಿ. ವಿ
೩ ಉದ್ಯೋಗ : ನಿವೃತ್ತ ಅಧ್ಯಾಪಕ ( ನಿವೃತ್ತಿ-೧೯೮೮)
೪ ಹುಟ್ಟಿದ ದಿನಾಂಕ : ೧೦-೬-೧೯೨೯
೫ ವಯಸ್ಸು : ೮೨ ವರ್ಷ
೬ ಹುಟ್ಟಿದ ಸ್ಥಳ : ತೀರ್ಥಹಳ್ಳಿ ತಾ. ಮೇಗರವಳ್ಳಿ ಬಳಿಯ ಗನವಳ್ಳಿ-ಅಗಳಿಬೈಲು
೭ ವಾಸಸ್ಥಳ : ಶಿವಮೊಗ್ಗ
೮ ವಿಳಾಸ : ಬಿ.ಎಸ್. ರಾಮಭಟ್ಟ, ‘ ಪದ್ಮಶ್ರೀ ‘ ೧೩೯ ಇ, ೩ ನೇ ಕ್ರಾಸ್, ಗೋಪಾಳಗೌಡ ಬಡಾವಣೆ, ಗೋಪಾಳ, ಶಿವಮೊಗ್ಗ-೫೭೭೨೦೫.
೯ ಫೋನ್ ನಂ. : ೦೮೧೮೨-೨೫೫೯೭೪
೧೦ ಸ್ವಾತಂತ್ರ್ಯ ಹೋರಾಟಗಾರ : ಸರಕಾರದಿಂದ ಗೌರವಧನ ಪಡೆಯುತ್ತಿರುತ್ತಾರೆ
೧೧ ಪ್ರಶಸ್ತಿ : ಶ್ರೀಮದ್ ರಂಭಾಪುರಿ ಮಹಾಸಂಸ್ಥಾನ ಮಠ, ಬಾಳೆಹೊನ್ನೂರು ಇವರಿಂದ ‘ ಸಾಹಿತ್ಯ ನಿಧಿ ‘ ಪ್ರಶಸ್ತಿಲಭಿಸಿದೆ.
ಸನ್ಮಾನ ಪತ್ರಗಳು : ನಗರ ಸಭೆ, ಶಿವಮೊಗ್ಗ
ವಿಪ್ರ ಟ್ರಸ್ಟ್, ಶಿವಮೊಗ್ಗ
೧೨ ಸಂಘ ಸಂಸ್ಥೆಗಳು :
೧) ಆಜೀವ ಸದಸ್ಯ : ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
೨) ಆಜೀವ ಸದಸ್ಯ : ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು
೩) ಆಜೀವ ಸದಸ್ಯ : ಕರ್ನಾಟಕ ಸಂಘ, ಶಿವಮೊಗ್ಗ
ಸಾಮಾಜಿಕ ಸೇವೆ
೧) ಸ್ಕೌಟ್ಸ್ : ಶಾಲಾ ಕಾಲೇಜುಗಳಲ್ಲಿ ಸ್ಕೌಟ್ಸ್ ಚಟುವಟಿಕೆಗಳು ೧೯೭೦-೧೯೮೦
೨) ಸೇವಾದಳ : ೧೯೬೮-೧೯೮೦
೩) ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ : ೧೯೭೦-೧೯೮೦

ಪ್ರಕಟವಾಗಿರುವ ಗ್ರಂಥಗಳು
ಹೆಸರು ಪ್ರಕಾಶಕರು ವರ್ಷ
೧ ಬಾಳಿನ ಬಯಕೆ ಎಸ್.ಎಸ್.ಎನ್. ಬುಕ್ ಡಿಪೋ, ಸಿಟಿ ಮಾರ್ಕೆಟ್, ಬೆಂಗಳೂರು ೧೯೯೬
೨ ಅಸ್ತಮಾನ ಶಿವಮೊಗ್ಗ ಪ್ರಿಂಟರ‍್ಸ್, ದುರ್ಗಿಗುಡಿ, ಶಿವಮೊಗ್ಗ ೧೯೮೫
೩ ನಗರ ಪ್ರಾಂತ್ಯದ ರೈತರ ಬಂಡಾಯ ದೀಪಕ್ ಪ್ರಕಾಶನ, ಶಿವಮೊಗ್ಗ ೧೯೯೬
೪ ಶಿವಮೊಗ್ಗ ಜಿಲ್ಲೆಯ ಸಂಗೀತ ಪರಂಪರೆ ಶ್ರೀ ರಾಮ ಸೇವಾ ಸಮಿತಿ, ಶಿವಮೊಗ್ಗ ೨೦೦೧
೫ ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಸ್ಕೃತಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಶಿವಮೊಗ್ಗ ೨೦೦೧
೬ ಬೆಳಗುತ್ತಿಯ ಅರಸೊತ್ತಿಗೆ ಅರಸು ಪ್ರಕಾಶನ, ಶಿವಮೊಗ್ಗ ೨೦೦೪
೭ ಕನಸಿನ ಬುತ್ತಿ ಏಕಸಂತೆ ಪ್ರಕಾಶನ, ಶಿವಮೊಗ್ಗ ೨೦೦೬
೮ ವಿಪ್ರ ಪ್ರಾಚೀನ ಪರಂಪರೆ ವಿಪ್ರ ಟ್ರಸ್ಟ್, ಶಿವಮೊಗ್ಗ ೨೦೦೮
೯ ಶಿವಮೊಗ್ಗ ನಗರದ ಇತಿಹಾಸ ದರ್ಶನ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೦೮
೧೦ ಮಲೆನಾಡಿನ ಜೈನ ದಾರ್ಶನಿಕ ನೆಲೆಗಳು ಮತ್ತು ಜಿನಮುನಿಗಳು ಕನಕಗಿರಿ ಶ್ರೀ ಜೈನ ಮಹಾಸಂಸ್ಥಾನ ಮಠ( ಚಾಮರಾಜನಗರ ಜಿಲ್ಲೆ) ೨೦೧೧



ಸಂಪಾದಿತ ಗ್ರಂಥಗಳು

೧ ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ ಡಾ ಎಂ.ಎಂ. ಕಲಬುರ್ಗಿ, ಬಿ.ಎಸ್. ರಾಮಭಟ್ಟ ಜಗದ್ಗುರು ಶ್ರೀ ಮುರುಘರಾಜೇಂದ್ರಮಠ, ಆನಂದಪುರ ೧೯೯೦
೨ ಶಿವಶ್ರೀ ಬಿ.ಎಸ್. ರಾಮಭಟ್ಟ ಜಗದ್ಗುರು ಶ್ರೀ ಮುರುಘರಾಜೇಂದ್ರಮಠ, ಆನಂದಪುರ ೧೯೯೦
೩ ಸಿಮೊಗೆ ಬಿ.ಎಸ್. ರಾಮಭಟ್ಟ ಡಾ. ಶ್ರೀಕಂಠಕೊಡಿಗೆ ಪ್ರೊ. ನಟರಾಜ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ ೨೦೦೮
೪ ಶಿವಮೊಗೆಯ ಸಿರಿ ಟಿ.ಎನ್. ನಾರಾಯಣಶಾಸ್ತ್ರಿ ಬಿ.ಎಸ್. ರಾಮಭಟ್ಟ ವಿಪ್ರ ಟ್ರಸ್ಟ್, ಶಿವಮೊಗ್ಗ ೨೦೦೮
ಪ್ರಕಟವಾಗಿರುವ ಲೇಖನಗಳು
ಹೆಸರು ಪ್ರಕಾಶಕರು ವರ್ಷ
೧ ಪ್ರರ್ಣಯ್ಯನವರ ಕಾರ್ಯಭಾರ ತಾಯಿನಾಡು ಪತ್ರಿಕೆ ೧೯೬೨
೨ ಬಂದನಾ ಹುಲಿರಾಯನು ಸುಧಾ ವಾರಪತ್ರಿಕೆ ೧೯೭೨
೩ ಕುಂದಾದ್ರಿ ತಾಯಿನಾಡು ಪತ್ರಿಕೆ ೧೯೮೧
೪ ಭಗ್ನಾವಶೇಷಗಳ ಬಿದನೂರು ಉದಯವಾಣಿ ಪತ್ರಿಕೆ ೧೯೮೧
೫ ಮುನಿವೃಂದ ಯಾತ್ರಿಕ ೧೯೮೪
೬ ಅವನತಿಯ ಅಂಚಿನಲ್ಲಿ ಐತಿಹಾಸಿಕ ಪ್ರಜ್ಞೆ ಯಾತ್ರಿಕ ೧೯೮೪
೭ ಮಹಾ ಚೇತನ ಸ್ಮರಣ ಸಂಚಿಕೆ ೧೯೮೦
೮ ಪ್ರವಾಸ-ಚೈತನ್ಯ ಸ್ವರೂಪಿ ಯಾತ್ರಿಕ ೧೯೮೫
೯ ಸಹ್ಯಾದ್ರಿಯ ಶ್ರೇಣಿಗಳು ಯಾತ್ರಿಕ ೧೯೮೫
೧೦ ಶಿವಮೊಗ್ಗ ಜಿಲ್ಲೆಯ ಜನಮೇಜಯನ ಶಾಸನಗಳು ಉದಯವಾಣಿ ೧೯೮೫
೧೧ ಭವ್ಯ ಪರಂಪರೆಯ ಶಿವಮೊಗ್ಗ ಬೃಹಸ್ಪತಿವಾಣಿ ೧೯೭೭
೧೨ ಶಾಂತಿಸಾಗರ ಉದಯವಾಣಿ ೧೯೮೦
೧೩ ಅಚ್ಚುತಪ್ರೇಕ್ಷರ ಪರಂಪರೆ ಕನ್ನಡಪ್ರಭ ೧೯೮೦
೧೪ ಪ್ರವಾಸಿ ಕೇಂದ್ರ ಕೊಡಚಾದ್ರಿ ಯಾತ್ರಿಕ ೧೯೮೬
೧೫ ಮೃಗವಧೆ ಪ್ರಾಚೀನ ಕ್ಷೇತ್ರ ಯಾತ್ರಿಕ ೧೯೮೬
೧೬ ಅಳಿವಿನ ಅಂಚಿನಲ್ಲಿ ಭುವನಗಿರಿ ಯಾತ್ರಿಕ ೧೯೮೬
೧೭ ಮಹಾಚೇತನದ ಬದುಕಿನ ಯಾತ್ರೆ ಯಾತ್ರಿಕ ೧೯೮೬
೧೮ ತುಂಗೆ ಪಾವನತರಂಗೆ ಯಾತ್ರಿಕ ೧೯೮೫
೧೯ ಅಮ್ಮನಘಟ್ಟ ಯಾತ್ರಿಕ ೧೯೮೭
೨೦ ಗೊಂಡಾರಣ್ಯದ ಗಿರಿಗಳು ಯಾತ್ರಿಕ ೧೯೮೭
೨೧ ಹಕ್ಕುಗಳಿಗೆ ಬಡಿದಾಡುವೆವು ನಾವು ಯಾತ್ರಿಕ ೧೯೮೧
೨೨ ವನಸಿರಿಯ ಮಡಿಲಿನ ಇಕ್ಕೇರಿ ಯಾತ್ರಿಕ ೧೯೮೭
೨೩ ಮಲೆಯಶಂಕರ ಯಾತ್ರಿಕ ೧೯೮೭
ಭಾರತದ ಭವಿಷ್ಯವನ್ನು ರೂಪಿಸಿದ ವಾಯವ್ಯದ ಕಣಿವೆಗಳು ಯಾತ್ರಿಕ ೧೯೮೮ ೧೯೮೭
೨೫ ಹರತಾಳು ಯಾತ್ರಿಕ ೧೯೮೭
೨೬ ಮಲೆನಾಡಿನ ರೈತರ ಹೋರಾಟ ಪ್ರಜಾವಾಣಿ ಪತ್ರಿಕೆ ೧೯೮೭
೨೭
೨೮ ಧರ್ಮ-ಸರ್ವವ್ಯಾಪಿ ಯಾತ್ರಿಕ ೧೯೮೬
೨೯ ಹರಿಹರಪುರ ಯಾತ್ರಿಕ ೧೯೮೮
೩೦ ವೇದಕಾವ್ಯ ಸಂಹಿತೆಯಲ್ಲಿ ಸೀತ ಯಾತ್ರಿಕ ೧೯೮೮
೩೧ ಪ್ರಾಚೀನ ಭಾರತದ ಷೋಡಶ ಮಹಾ ಜನಪದಗಳು ಯಾತ್ರಿಕ ೧೯೮೮
೩೨ ಭಗ್ನಾವಶೇಷಗಳ ಬಂದಳಿಕೆ ಉದಯವಾಣಿ ೧೯೮೯
೩೩ ಬುಕ್ಕರಾಯನ ತೆಲುಗು ಶಾಸನ ಉದಯವಾಣಿ ೧೯೮೮
೩೪ ಕುರುವದ ಅಪೂರ್ವ ಶಿಲ್ಪಗಳು ಪ್ರಜಾವಾಣಿ ೧೯೯೦
೩೫ ಪಾಳು ಬಿದ್ದ ಸಿದ್ದೇಶ್ವರ ದೇವಾಲಯ ಕನ್ನಡಪ್ರಭ ೧೯೯೦
೩೬ ಜ್ಯೋತಿಷ್ಯ ಅವ್ಶೆಜ್ಞಾನಿಕವೆ? ಋಷ್ಯಶೃಂಗ ೧೯೯೦
೩೭ ಮಂಡಳಿಯ ಇತಿಹಾಸ ಪ್ರಜಾಮತ ೧೯೯೧
೩೮ ಮಲೆನಾಡಿನ ಅಭಿವೃದ್ಧಿಗೆ ಮಾರ್ಗ ಪ್ರಜಾಮತ ೧೯೯೧
೩೯ ಗಣೇಶಾಯಿಣಿ ಕನ್ನಡಪ್ರಭ ೧೯೯೨
೪೦ ಕೆಳದಿ ಅರಸರ ಸಮಾಧಿಗಳು ಕನ್ನಡಪ್ರಭ ೧೯೯೨
೪೧ ಹವ್ಯಕ ಪರಂಪರೆ ಹೈವಪ್ರಭ ( ಸ್ಮರಣ ಸಂಚಿಕೆ) ೧೯೯೧
೪೨ ಕೆಳದಿ ಸಂಸ್ಥಾನದ ಆಡಳಿತ ಸ್ವರೂಪ ಶಿವಶ್ರೀ ೧೯೯೧
೪೩ ಕೆಳದಿರಾಣಿ ಚೆನ್ನಮ್ಮಾಜಿ ತರಳಬಾಳು ಹುಣ್ಣಿಮೆ ( ಸ್ಮರಣ ಸಂಚಿಕೆ) ೧೯೯೨
೪೪ ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಸಾಹಿತ್ಯ ವಿಕಾಸ ವಜ್ರಪಥ ( ಶಿವಮೊಗ್ಗ ಕರ್ನಾಟಕ ಸಂಘದ ಸ್ಮರಣ ಸಂಚಿಕೆ) ೧೯೯೩
೪೫ ಬಂಡೆ ( ಕವನ) ನಾವಿಕ ೧೯೯೫
೪೬ ಶಿವಮೊಗ್ಗ ಜಿಲ್ಲೆಯ ಶೈಕ್ಷಣಿಕ ಇತಿಹಾಸ ಜ್ಞಾನಾಮೃತ (ಕುವೆಂಪು ವಿಶ್ವವಿದ್ಯಾಲಯ ಸಂಪುಟ) ೧೯೯೫
೪೭ ಚೆಲುವ ರಂಗಪ್ಪ ಹೊನ್ನತೇರು (ಹೊನ್ನಾಳಿ ತಾ. ಕ.ಸಾ. ಪರಿಷತ್ತಿನ ಸ್ಮರಣ ಸಂಚಿಕೆ) ೧೯೯೫
೪೮ ಕೆಳದಿ ಅರಸು ಮನೆತನ ಸಾರಂಗಶ್ರೀ ೧೯೯೫
೪೯ ಪ್ರಗತಿ ಕಾಣದ ಪ್ರವಾಸೋದ್ಯಮ ಜನವಾರ್ತೆ ೧೯೯೬
೫೦ ಶಿವಪ್ಪನಾಯಕನ ಅರಮನೆ ಜನವಾರ್ತೆ ೧೯೯೬
೫೧ ಕರ್ನಾಟಕದ ಪ್ರಮುಖ ಮಾನಸ್ಥಂಭಗಳು ಜನವಾರ್ತೆ ೧೯೯೬
೫೨ ಮಲುಹಣ ಕನ್ನಡಪ್ರಭ ೧೯೯೬
೫೩ ಅಜಾಗರೂಕತೆ ಅನಾಹುತ ಜನವಾರ್ತೆ ೧೯೯೬
೫೪ ಕುರುವ ಕಾಳಾಮುಖ ತವರು ಜನವಾರ್ತೆ ೧೯೯೬
೫೫ ಜ್ಯೋತಿರ್ಮಯ ದೀಪಾವಳಿ ಜನವಾರ್ತೆ ೧೯೯೬
೫೬ ಕರ್ನಾಟಕ ಏಕೀಕರಣದ ಇತಿಹಾಸ ಜನವಾರ್ತೆ ೧೯೯೬
೫೭ ವರದಕ್ಷಿಣೆಯ ಪಿಡುಗಿಗೆ ಪರಿಹಾರವಿಲ್ಲವೆ? ಜನವಾರ್ತೆ ೧೯೯೬
೫೮ ಈಶಾನ್ಯದ ಅಪಾಯಕಾರಿ ಉಲ್ಫಾಸಮಸ್ಯೆ ಜನವಾರ್ತೆ ೧೯೯೬
೫೯ ಕೃತಿಕಾರ ಕುಕ್ಕೆ ಸೀತಾರಾಮಶಾಸ್ತ್ರಿ ಜನವಾರ್ತೆ ೧೯೯೬
೬೦ ಮಹಾ ಮುತ್ಸುದ್ಧಿ ಶ್ರೀ ಕೃಷ್ಣ ಜನವಾರ್ತೆ ೧೯೯೬
೬೧ ಅನಾಥಳಾಗಿರುವ ಅಕ್ಕಮ್ಮ ನಾವಿಕ ೧೯೯೬
೬೨ ಮರಳಿ ಬಂದ ಯುಗಾದಿ ನಾವಿಕ ೧೯೯೭
೬೩ ಶಿವಮೊಗ್ಗದ ಬೆಕ್ಕಿನಕಲ್ಮಠ ಜನವಾರ್ತೆ ೧೯೯೭
೬೪ ನೈಸರ್ಗಿಕ ಕೃಶಿಯ ಹರಿಕಾರ ಪುಕುಒಕ ಜನವಾರ್ತೆ ೧೯೯೭
೬೫ ಕಾಶಿಪುರದ ಶಿಲಾಶಾಸನ ನಾವಿಕ ೧೯೯೭
೬೬ ಕೆಳದಿಕಾಲದ ಜೈನ ಧರ್ಮ ಶ್ರೀ ಗುಂಡಾಜೋಯ್ಸ್ ಅಭಿನಂದನಾ ಗ್ರಂಥ ೧೯೯೭
೬೭ ಮಹಾದಾರ್ಶನಿಕ ರಾಧಾಕೃಷ್ಣನ್ ಜನವಾರ್ತೆ ೧೯೯೮
೬೮ ಅಡಗಿರುವ ಆದಿ ರಂಗನಾಥಸ್ವಾಮಿ ಜನವಾರ್ತೆ ೧೯೯೮
೬೯ ಮರ ( ಕವಿತೆ) ಜನವಾರ್ತೆ ೧೯೯೮
೭೦ ವಿಜಯನಗರ ಸಾಮ್ರಾಜ್ಯ ಕುತೂಹಲಕರ ಆಧಾರ ಉದಯವಾಣಿ ೧೯೯೯
೭೧ ಮಕರ ಸಂಕ್ರಾಂತಿ ಸಂಭ್ರಮ ಜನವಾರ್ತೆ ೧೯೯೯
೭೨ ನಮ್ಮ ಮನೆ ಶಿವಮೊಗ್ಗ ಹೌಸಿಂಗ್ ಸೊಸೈಟಿ ಸ್ಮರಣ ಸಂಚಿಕೆ ೨೦೦೦
೭೩ ಗವಿ ಮಠ:ಐತಿಹಾಸಿಕ ಹಿನ್ನೆಲೆ ತರಳಬಾಳು ಸಂಚಿಕೆ ೨೦೦೦
೭೪ ಶಿವಮೊಗ್ಗ ನಗರದ ಕೈಗಾರಿಕಾ ಇತಿಹಾಸ ನಗರಸಭೆ ಶತಮಾನೋತ್ಸವ ಸಂಚಿಕೆ ೨೦೦೦
೭೫ ಹೀಗಿತ್ತು ಶಿವಮೊಗ್ಗ ನಾವಿಕ ೨೦೦೦
೭೬ ೧೭೮ ವರ್ಷಗಳ ಹಿಂದಿನ ಅಂಚೆಕಾರ್ಡು ನಾವಿಕ ೨೦೦೦
೭೭ ಒಂದು ಅಭೂತಪೂರ್ವ ಪಟ್ಟಾಭಿಷೇಕ ಮಹೋತ್ಸವ ಸಂಯುಕ್ತ ಕರ್ನಾಟಕ ೨೦೦೦
೭೮ ಶಾಸನದಲ್ಲಿ ನೆಲೆನಿಂತ ಸೌಳಂಗ ನಾವಿಕ ೨೦೦೦
೭೯ ದೆಹಲಿಯ ಮೆಹರೂಲಿ ಸ್ಥಂಭ ವಿಜಯ ಕರ್ನಾಟಕ ೨೦೦೦
೮೦ ತಾಳಿಕೋಟೆ ಕದನ ಕರ್ಮಕಥೆ ಕಸ್ತೂರಿ ೨೦೦೧
೮೧ ಕೆಳದಿ ಅರಸೊತ್ತಿಗೆಯ ಕೊನೆಯ ದಿನ ಕಸ್ತೂರಿ ೨೦೦೧
೮೨ ಆತ್ಮಾರ್ಪಣೆಯ ಕ್ರೂರ ಸಂಪ್ರದಾಯ ಕಸ್ತೂರಿ ೨೦೦೨
೮೩ ಜೈನಾಗಮಗಳಲ್ಲಿ ಮೂರ್ತಿಶಿಲ್ಪ ಕಸ್ತೂರಿ ೨೦೦೦
೮೪ ಬುಡಕಟ್ಟು ಜನಾಂಗದ ಕುರುಬರು ಕಸ್ತೂರಿ ೨೦೦೩
೮೫ ಪುರಂದರದಾಸರ ಜನ್ಮ ದಿನ ನಾವಿಕ ೨೦೦೪
೮೬ ಮುದ್ದೇನಹಳ್ಳಿ ಸ್ಮಾರಕಗಳು ವಿಜಯ ಕರ್ನಾಟಕ ೨೦೦೪
೮೭ ಬುದ್ಧನ ನಾಡಿನ ಬೌದ್ಧ ಯಾತ್ರಿಕರು ಕಸ್ತೂರಿ ೨೦೦೪
೮೮ ಮಲೆನಾಡಿನ ಶಾಸನೋಕ್ತ ಕವಿಗಳು ಕಸ್ತೂರಿ ೨೦೦೪
೮೯ ಕಾಳಾಮುಖರು ಒಂದು ಅಧ್ಯಯನ ಕಸ್ತೂರಿ ೨೦೦೩
೯೦ ಕುರುಕ್ಷೇತ್ರ ಕದನದ ಕರ್ಮಕಥೆ ಮಲ್ಲಾರ ೨೦೦೫
೯೧ ದಂತಕಥೆಯಾದ ದಾನವರು ಮಲ್ಲಾರ ೨೦೦೫
೯೨ ಶಿವಮೊಗ್ಗ ರೈಲ್ವೆ ಯೋಜನೆ ನಾವಿಕ ೨೦೦೬
೯೩ ಮಹಾಭಾರತದಲ್ಲಿ ಬಲರಾಮ ಮಲ್ಲಾರ ೨೦೦೬
೯೪ ಮಹದಾಜಿ ಸಿಂಧ್ಯನ ಅಂತಿಮ ದಿನ ಕಸ್ತೂರಿ ೨೦೦೬
೯೫ ಶಾಸನದೇವತೆ ಪದ್ಮಾವತಿ ಮಲ್ಲಾರ ೨೦೦೭
೯೬ ಪೊಂಬುಚದ ಪಂಚಕೂಟ ಬಸದಿ ಕಸ್ತೂರಿ ೨೦೦೭
೯೭ ಸಪ್ತಸಿಂಧುವಿನ ಪುರಾತನರು ಮಲ್ಲಾರ ೨೦೦೭
೯೮ ಕೈಕೆ ಮಲ್ಲಾರ ೨೦೧೦
೯೯ ಗೋರಖನಾಥ ಮಲ್ಲಾರ ೨೦೧೦
೧೦೦ ವಿಜಯನಗರದ ಪೂರ್ವೇತಿಹಾಸ ಮಲ್ಲಾರ ೨೦೧೧
೧೦೧ ಮಾರಾಟವಾಗುತ್ತಿದ್ದ ಮಹಿಳೆಯರು ಕರವೇನಲ್ನುಡಿ ೨೦೧೧
೧೦೨ ಮೈಸೂರು ಸಂಸ್ಥಾನದ ಸಾರಿಗೆ ಸಂಪರ್ಕದ ರೋಚಕದ ಕಥೆ ನಾವಿಕ ೨೦೦೬
೧೦೩ ಜಲದಾಹ ನಾವಿಕ ೨೦೧೦
೧೦೪ ಪೊಂಬುಚದ ಕಮಠೇಶ್ವರ ದೇವಾಲಯ ಮಲ್ಲಾರ ೨೦೦೭
೧೦೫ ಕುಮಾರವ್ಯಾಸ ಭಾರತದಲ್ಲಿ ಗಾಯಾಳುಗಳ ಚಿಕಿತ್ಸೆ ತಾಂತ್ರಿಕಥೆ ಸಂಯುಕ್ತ ಕರ್ನಾಟಕ ೨೦೦೫
೧೦೬ ದಂತಕಥೆಯಾದ ಅಸುರ ದೈತ್ಯ ದಾನವರು ಮಲ್ಲಾರ ೨೦೦೫
೧೦೭ ದೇವಾಲಯಗಳು ಮಲ್ಲಾರ ೨೦೦೮
೧೦೮ ಹಿಮಾಲಯದ ಹೆಬ್ಬಾಗಿಲು ಹೃಶಿಕೇಶ ಸಂಯುಕ್ತ ಕರ್ನಾಟಕ ೨೦೦೭
೧೦೯ ವೇದಕಾಲೀನ ರುದ್ರ ಮಲ್ಲಾರ ೨೦೦೮
ಪುಸ್ತಕ ವಿಭಾಗ
೧ ಶ್ರೀರಂಗಪಟ್ಟಣದ ಪತನ ಕಸ್ತೂರಿ ೧೯೮೮
೨ ನಗರ ಪ್ರಾಂತ್ಯದ ರೈತರ ಬಂಡಾಯ ಕಸ್ತೂರಿ ೧೯೮೯
೩ ಅನ್ವೇಷಣೆಯ ಹಾದಿಯಲ್ಲಿ ಕಸ್ತೂರಿ ೧೯೯೫
೪ ಪಶ್ಚಿಮ ಕರಾವಳಿಯಲ್ಲಿ ಪೋರ್ಚುಗೀಸರು ಕಸ್ತೂರಿ ೧೯೯೯
೫ ದಿವಾನ್ ಪ್ರರ್ಣಯ್ಯನವರು ಕಸ್ತೂರಿ ೨೦೦೦
೬ ಕೆಳದಿ ಅರಸೊತ್ತಿಗೆಯ ಕೊನೆಯ ದಿನಗಳು ಕಸ್ತೂರಿ ೨೦೦೧



ಪ್ರಬಂಧಗಳು
೧ ವೃಕ್ಷ ಪುರಾಣಂ ಋಷ್ಯಶೃಂಗ ೧೯೯೬
೨ ನಾಸಿಕ ಪುರಾಣಂ ಜನವಾರ್ತೆ ೨೦೦೦
೩ ದಿಬ್ಬಣದ ಗಾಡಿಗಳು ಕಸ್ತೂರಿ ೨೦೦೨
೪ ಆತಿಥ್ಯ ವಿಜಯ ಕರ್ನಾಟಕ ೨೦೧೦
೫ ಸಂತೆ ಸಂಯುಕ್ತ ಕರ್ನಾಟಕ ೨೦೧೦
೬ ಜಮಾಬಂಧಿ ವಿಜಯ ಕರ್ನಾಟಕ ೨೦೧೦
೭ ಅವಸಾನದ ಅಂಚಿನಲ್ಲಿರುವ ಹಳೆ ಡಿ.ಸಿ. ಕಟ್ಟಡ ನಾವಿಕ ದಿನ ಪತ್ರಿಕೆ ೨೦೦೭
ಸಂಶೋಧನಾ ಲೇಖನಗಳು
೧ ಕಲ್ಮನೆ-ಉಜ್ಜಯಿನಿ ಕ್ಷತ್ರಪರ ನೆಲೆ-ನಾಣ್ಯಗಳು-ಶೋಧನೆ ನಾವಿಕ ೨೦೦೫
೨ ತೀರ್ಥಹಳ್ಳಿ-ಜೈನಶಿಲ್ಪ ನಾವಿಕ ೨೦೦೬
೩ ಶಿವಮೊಗ್ಗದ ಮಂಡಳಿಯ ಕಲ್ಲೂರು ಗುಡ್ಡದ ಶಾಸನ ಇತಿಹಾಸ ದರ್ಶನ ೨೦೦೯
೪ ಪಾಳು ಬಿದ್ದ ಕೆಳದಿ ಅರಸರ ಸಮಾಧಿಗಳನ್ನು ಕಂಡುಹಿಡಿದು ವಿವರಗಳನ್ನು ನೀಡಿದ್ದು, ಜೀರ್ಣೋದ್ಧಾರಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ.
೫ ಶಿಕಾರಿಪುರ ತಾಲ್ಲೂಕ್ ಮುದ್ದನಹಳ್ಳಿಯ ಪ್ರಾಚ್ಯಾವಶೇಷಗಳ ಸಂಶೋಧನೆ
೬ ಕುರುವ ಕಾಳಾಮುಖರು
ಸಣ್ಣಕಥೆಗಳು
೧ ಶಾಪ ಜನವಾರ್ತೆ ೧೯೮೭
೨ ಕಡುಗಲಿ ನಾವಿಕ ೧೯೮೭
೩ ಅನಿರೀಕ್ಷಿತ ನಾವಿಕ ೧೯೮೮
೪ ಕಳಚಿತು ಕರ್ಮಬಂಧನ ನಾವಿಕ ೧೯೮೮
೫ ಮಾನಸ ನಾವಿಕ ೧೯೮೮
೬ ಅಕ್ಕಮಚೌಕಿ ತಾಯಿನಾಡು ೧೯೭೫
೭ ಚೆಂಗುಲಿ ನಾವಿಕ ೧೯೮೯
೮ ಗಿಡಮೂಲಿಕೆಗಳೆಡೆಯಲ್ಲಿ ಕಸ್ತೂರಿ ೧೯೮೨
೯ ಕಾರ್ನೇಲಿಯ ಮಂಗಳ ೧೯೮೨
೧೦ ಜೈನ ಕವಿತ್ರಿಯ ಜೀವನಗಾಥೆ ಕಸ್ತೂರಿ ೨೦೦೫
೧೧ ರಾವಣನಿಗೆ ಸೆರೆಯಾದ ಶ್ರೀರಾಮ ಮಲ್ಲಾರ ೨೦೦೭
೧೨ ಆತ್ಮಾಹುತಿ ಸಂಯುಕ್ತ ಕರ್ನಾಟಕ ೨೦೦೭
೧೩ ಪರಿವರ್ತನೆ ಸಂಯುಕ್ತ ಕರ್ನಾಟಕ ೨೦೦೮
೧೪ ಶಕುನ ಮಲ್ಲಾರ ೨೦೧೦
೧೫ ಮಹಾಮಂಥನ ಮಲ್ಲಾರ ೨೦೧೦
೧೬ ಅಗ್ರಪೂಜೆ ಶಿವಮೊಗ್ಗ ಟೈಮ್ಸ್ ೨೦೧೦

ವಿಮರ್ಶೆ
೧ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ತಮಸೋಮ ೧೯೮೪
೨ ಪ್ರಾಚೀನ ಭಾರತದ ಯುದ್ಧ ಕಲೆ ಕಸ್ತೂರಿ ೨೦೦೬
೩ ಭೂಪಾಳಂ ಬದುಕು ಬರಹ ಬಳ್ಳೆಕೆರೆ ಹನುಮಂತಪ್ಪ(ಸಂಪಾದಕ) ೨೦೦
ಆಕಾಶವಾಣಿ
೧) ಪ್ರಸಾರವಾದ ರೂಪಕಗಳು - ೨
೨) ನಾಟಕ - ೧
೩) ಭಾಷಣಗಳು- ೨೫ ( ಸೇತುವೆ, ಶಿಲ್ಪ, ದಾನಧರ್ಮ ಬಹುರೂಪಿ ವಜ್ರಗಳು ಇತ್ಯಾದಿ)
ದೂರದರ್ಶನ
ಸಂದರ್ಶನ: ದೂರದರ್ಶನ - ಚಂದನ ಕಾರ್ಯಕ್ರಮ
೧) ಸಂದರ್ಶನ-೧ ೨೦೦೬
೨) ಈ ಟಿ.ವಿ, ಸುವರ್ಣ- ಛಾನಲ್ ನಲ್ಲಿ ಸಂದರ್ಶನ-೨
೨೦೧೦ ನೇ ವರ್ಷದಲ್ಲಿ ಇವರ ಪ್ರಕಟವಾದ ಬರಹಗಳನ್ನು ಸಂಗ್ರಹಿಸಿ, ವಿಂಗಡಿಸಿ ಒಂದು ಕೃತಿಯ ರೂಪವನ್ನು ನೀಡಿ ಇದಕ್ಕೆ ಗೊಂಚಲು‘ ಎಂಬ ಶೀರ್ಷಿಕೆಯನ್ನಿಟ್ಟಿದ್ದಾರೆ. ಈ ಗೊಂಚಲು ಕೃತಿಯನ್ನು ಕಂಪ್ಯೂಟರ್‌ಗೊಳಿಸಿದ್ದು ನಾನು ಎಂಬ ಹೆಮ್ಮೆ ನನಗಿದೆ.
ಇತ್ತೀಚೆಗೆ ಇವರು ರಚಿಸಿದ ‘ ಯ ವ ನಿ ಕ ‘ ಎಂಬ ನಾಟಕವನ್ನು ಭದ್ರಾವತಿ ಆಕಾಶವಾಣಿ ಕಲಾವಿದರು ಅಭಿನಯಿಸಿದ್ದು, ಇದು ಭದ್ರಾವತಿ ಆಕಾಶವಾಣಿಯಲ್ಲಿ ಈ ವಾರದಲ್ಲಿ ಪ್ರಸಾರವಾಗಲಿದೆ.
ಹೀಗೆ ಹಲವಾರು ಚಟುವಟಿಕೆಗಳಲ್ಲಿ ಈಗಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ವಿಜಯ ಶ್ರೀಕಂಠಮೂರ್ತಿ.

2 ಕಾಮೆಂಟ್‌ಗಳು:

  1. ಒಬ್ಬ ಘನವಿದ್ವಾಂಸರು ನಮ್ಮ ಕುಟುಂಬದ ಸಮೀಪ ಬಂಧುಗಳೆಂಬ ಅಭಿಮಾನ ನನಗಿದೆ. ಪರಿಚಯ ಮಾಡಿದ ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಶ್ರೀ ಶ್ರೀಕಂಠಮೂರ್ತಿಯವರ ಕೃಪೆಯಿಂದ ನಾನು ಈ ಹಿಂದೆ ಶ್ರೀ ರಾಮಭಟ್ಟರವನ್ನು ಭೆಟ್ಟಿಯಾಗುವ ಸಂದರ್ಭ ಒದಗಿತ್ತು. 'ಕೆಳದಿ ನೃಪ ವಿಜಯ' ದ ಗದ್ಯಭಾಗವನ್ನು ನಾನು ಆಂಗ್ಲಭಾಷೆಗೆ ತರ್ಜುಮೆ ಮಾಡುವ ಸಂದರ್ಭದಲ್ಲಿ ಭೇಟಿಯಾದದ್ದು. ಅವರು ನನಗೆ ಬೇಕಾದ ಕೆಲವು ವಿಷಯಗಳನ್ನು ಮತ್ತು ಅಪರೂಪದ ಶಿವಪ್ಪನಾಯಕನ ಚಿತ್ರವನ್ನೂ ಮುಕ್ತಮನಸ್ಸಿನಿಂದ ಕೊಟ್ಟು ಸಹಾಯ ಮಾಡಿದರು. ಈ ಇಳಿವಯಸ್ಸಿನಲ್ಲಿಯೂ ಅವರಿಗೆ ಅವರ ಇತಿಹಾಸ ಕ್ಷೇತ್ರದಲ್ಲಿರುವ ಆಸಕ್ತಿ ನಿಜಕ್ಕೂ ಅನುಕರಣೀಯ. ಅವರಿಗೆ ನನ್ನ ಅನಂತ ಪ್ರಣಾಮಗಳು.

    ಪ್ರತ್ಯುತ್ತರಅಳಿಸಿ