ಮಂಗಳವಾರ, ಸೆಪ್ಟೆಂಬರ್ 13, 2011

ಸುದ್ಧಿ! ಶುದ್ಧಿ!

ಈ ಸಮಾಜವೇ ಹಾಗೆ
ಕೆಲವರನ್ನು ಹೀರೋ ಮಾಡಿಬಿಡುತ್ತದೆ ಅವರಲ್ಲಿ ಏನಿಲ್ಲದಿದ್ದರೂ!
ಹಲವರು ಇವರ ಕಣ್ಣಿಗೆ ಬೀಳುವುದೇ ಇಲ್ಲ  ಅವರಲ್ಲೆಲ್ಲಾ ಇದ್ದರೂ !!

 ಬಡ   ಬೋರೆ ಗೌಡನಿಗೆ  ತಿಂಗಳೆಲ್ಲಾ ಉಪವಾಸ
ಬೇಡ ನಮಗೆ ಅವನ ಸಹವಾಸ!
ಇಲ್ಲೊಬ್ಬ ಗಾಂಧೀ ಪ್ರತಿಮೆ ಎದಿರು ದಿನವೊಂದು ಕಳೆದು 
ಮಾಡಿದ ಉಪವಾಸ , ಅದೊಂದು ಪುಟಕ್ಕೆ ಸೇರಿದ ಇತಿಹಾಸ!

ಅವನಿಗೆ ಹೊಟ್ಟೆಗೆ ಸಿಗಲಿಲ್ಲ!
ಇವನಿಗೆ ಬೊಜ್ಜು ಕರಗಲಿಲ್ಲ!

ಲಕ್ಷಾಂತರ ಜನರ ಕೊಂಡೊಯ್ಯುವ ಬಸ್ಸುಗಳು ಆಗುವುದಿಲ್ಲ ಸುದ್ಧಿ!
ಮರಕ್ಕೆ ಡಿಕ್ಕಿ ಹೊಡೆದು ಒಬ್ಬನ ಕಾಲ್ಮುರಿದ ಬಸ್ಸಿನದೆ ಪತ್ರಿಕೆಯ ತುಂಬಾ ಸುದ್ಧಿ!!

ನೀವು ಸುದ್ಧಿಯಾಗಬೇಕೆ
ಶುದ್ಧಿ ಯಾಗಬೇಕೆ?
ಅದು ನಿಮಗೆ ಸೇರಿದ್ದು!!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ