ಗುರುವಾರ, ಸೆಪ್ಟೆಂಬರ್ 9, 2010

ನಮ್ಮ ಹಿತ್ತಲ ಮನೆ

ಹೀಗಿತ್ತು ನಮ್ಮ ಹಿತ್ತಲ ಮನೆ

ನನ್ನ ಹಳ್ಳಿಯಲ್ಲಿ ನಮಗೊಂದು ಹಿತ್ತಲು. ಅದರಲ್ಲಿ ಒಂದು ಚಿಕ್ಕ ಮನೆ ಕಟ್ಟಿ ಅದರಲ್ಲಿ ಅದರಲ್ಲಿ ಹಸು ಸಾಕುವ ಯೋಜನೆ ಮಾಡಿ ವಿಫಲವಾಯ್ತು. ಹತ್ತಾರು ವರ್ಷಗಳಿಂದ ಹಾಗೆಯೇ ಪಾಳು ಬಿತ್ತು. ಊರ ಜನರಿಗೆ ತೆರೆದ ಶೌಚಾಲಯವಾಯ್ತು. ನಾನು ಊರಿಗೆ ಹೋದಾಗಲೆಲ್ಲಾ ಅದರಮುಂದೆ ನಿಂತು ದು:ಖಿಸುವುದೊಂದೇ ದಾರಿಯಾಗಿತ್ತು. ಅಂತೂ ಅದಕ್ಕೂ ಇದ್ದಕ್ಕಿದ್ದಂತೆ ಮೊಕ್ಷ ಸಿಕ್ಕಿತು. ತಮ್ಮನ ಮಗಳ ಮದುವೆ ನಿಶ್ಚಯವಾಯ್ತು. ಅದೇ ಜಾಗದಲ್ಲಿ ಮಗಳ ಮದುವೆ ಮಾಡಬೇಕೆಂದು ಸಂಕಲ್ಪ ಮಾಡಿದೆ. ಮುಂದೆ ಮೂರು ವಾರಗಳಲ್ಲಿ ಆದ ಪರಿವರ್ತನೆಯ ಚಿತ್ರ ಹಾಕಿರುವೆ, ನೋಡಿ.

ಇಟಾಚಿಯಿಂದ ನೆಲಸಮ ಮಾಡಿ ಕಾಮಗಾರಿಶುರುಮಾಡಿದಾಗ

ಸಿದ್ಧವಾಯಿತು ಐದುಸಾವಿರ ಲೀಟರ್ ನೀರು ಹಿಡಿಯುವ ಸಂಪ್

ಹಗಲಿರುಳು ದುಡಿದ ದಿಲೀಪ

ಸುತ್ತ ಕಾಂಪೌಂಡ್ ನಿರ್ಮಿಸಿ, ಇದ್ದ ಮನೆಯನ್ನು ದುರಸ್ತಿ ಗೊಳಿಸಿ, ಶೌಚಾಲಯ, ಸ್ನಾನಗೃಹ, ನೀರು ವಿದ್ಯುತ್ ವ್ಯವಸ್ತೆ ಮಾಡಿ, ಅದರಲ್ಲಿಯೇ ಶೀಟ್ ಪೆಂಡಾಲ್ ಹಾಕಿ ನಡೆದೇ ಹೋಯ್ತು ತಮ್ಮನ ಮಗಳ ಮದುವೆ.ಕೇವಲ ಮೂರು ವಾರಗಳಲ್ಲಿ ಇಷ್ಟೆಲ್ಲಾ ಸಾಧ್ಯವಾಯ್ತೆಂದರೆ ನಂಬಲು ಕಷ್ಟವಾದೀತು. ಇದೇ ಜಾಗದಲ್ಲಿ ಒಂದು ಸಭಾಂಗಂಣ ನಿರ್ಮಾಣ ಮಾಡಬೇಕೆಂಬುದುಊರ ಜನರ ಬೇಡಿಕೆ.ಇಲ್ಲಿಯೇ ಒಂದು ಗುಡಿ ಕೈಗಾರಿಕೆಶುರುಮಾಡಿ ಕೆಲಸ ವಿಲ್ಲದ ಕೈಗಳಿಗೆ ಕೆಲಸ ಕೊಟ್ಟು,ಊರಿನ ಜನರಿಗೆ ಆಗಿಂದಾಗ್ಗೆ ಸಂಸ್ಕಾರ ಪ್ರಧಾನವಾದ ಕಾರ್ಯಕ್ರಮಗಳನ್ನು ನಡೆಸುವ ಚಿಂತನೆ. ಮೊದಲನೆಯ ಕಾರ್ಯಕ್ರಮವಾಗಿ ತುಮಕೂರಿನ ರಾಮಕೃಷ್ಣ- ವಿವೇಕಾನಂದಾಶ್ರಮದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಂದ ನಡೆದ ಉಪನ್ಯಾಸ ಕಾರ್ಯಕ್ರಮವು ಜನರ ಮೆಚ್ಚುಗೆಗೆ ಪಾತ್ರವಾಯ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ