ಶುಕ್ರವಾರ, ಜುಲೈ 22, 2011

ಇಲ್ಲಿ ಮಾತನಾಡಬೇಕು

ಆತ್ಮೀಯ ಬಂಧುಗಳೇ,
ನನ್ನೊಡನೆ ಬರೆಯಲು ಶ್ರೀಮತಿ ವಿಜಯ ಶ್ರೀಕಂಠಮೂರ್ತಿ ಮತ್ತು ಹಿರಿಯರಾದ ಕವಿನಾಗರಾಜ್ ಜೊತೆಗಿದ್ದಾರೆ. ನಾನು ಗಮನಿಸಿದಂತೆ ಕಳೆದ ಒಂದುತಿಂಗಳಿಂದೀಚೆಗೆ ಸುಮಾರು ಒಂದು ಸಹಸ್ರಕ್ಕೂ ಹೆಚ್ಚು ಜನರು ಬ್ಲಾಗಿಗೆ ಬೇಟಿಕೊಟ್ಟಿದ್ದಾರೆ.ನಮ್ಮ ಬಂಧುಗಳಲ್ಲದ ಅನೇಕ ಅಭಿಮಾನಿಗಳೂ ಭೇಟಿ ಕೂಟ್ಟಿರಬಹುದು. ನಮ್ಮ ಬಂಧುಗಳು ಇಲ್ಲಿ ಮಾತನಾಡಬೇಕು. ಕನಿಷ್ಟ ಪಕ್ಷ ಒಂದು ಕಾಮೆಂಟ್ ಆದರೂ ಮಾಡಬೇಕು. ಕ್ಷೇಮ ಸಮಾಚಾರ ತಿಳಿಸಬೇಕು. ಕನ್ನಡದಲ್ಲಿ ಬರೆಯಲು ಬಾರದವರಿಗಾಗಿ ಕನ್ನಡ ಸ್ಲೇಟ್ ಕೊಟ್ಟಿರುವೆ. ಅದರೊಟ್ಟಿಗೆ ಯಾವ ಕನ್ನಡ ಅಕ್ಷರಕ್ಕೆ ಯಾವ ಇಂಗ್ಳೀಶ್ ಅಕ್ಷರ ಕುಟ್ಟಬೇಕೆಂಬ ಪಟ್ಟಿಯೂ ಇದೆ.ವಿಜಯ ಅವರಂತ ಮಹಿಳೆಯೊಬ್ಬರು ತಮ್ಮ ಕಛೇರಿ ಕೆಲಸಗಳು ಮತ್ತು ಗೃಹಕೃತ್ಯದ ಜೊತೆಗೇ ಬ್ಲಾಗ್ ನಲ್ಲಿ ಬರೆಯುವ ಗಂಭೀರ ಪ್ರಯತ್ನ ಮಾಡಿದ್ದಾರೆ.ಅವರು ನಮಗೆಲ್ಲಾ ಸ್ಪೂರ್ತಿಯಾಗಬೇಡವೇ? ಎರಡು ಮಾತು ಬರೆಯಿರಿ ಪ್ಲೀಸ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ