ಗುರುವಾರ, ಜುಲೈ 21, 2011

ಸಂಪಾದಕೀಯ

ಹರಿಹರಪುರದಲ್ಲಿ ಜನ್ಮ ತಾಳಿದ ಅಥವಾ ಹರಿಹರಪುರದ ಸಂಬಂಧ ಹೊಂದಿದ ಪ್ರಸಿದ್ಧ ವ್ಯಕ್ತಿಗಳ ಪರಿಚಯ ಮಾಲಿಕೆ ಆರಂಭವಾಗಿದೆ. ಅದರ ಶುಭಾರಂಭವಾಗಿ ಶಿವಮೊಗ್ಗದಿಂದ ಶ್ರೀಮತಿ ವಿಜಯ ಶ್ರೀಕಂಠಮೂರ್ತಿಯವರು ಅವರ ತಂದೆ ಶ್ರೀ ಬಿ.ಎಸ್.ರಾಮಭಟ್ಟರ ಪರಿಚಯ ಲೇಖನವನ್ನು ಪ್ರಕಟಿಸಿದ್ದಾರೆ. ದಯಮಾಡಿ ಓದಿ ನಮ್ಮ ಸಂಬಂಧಿಕರಲ್ಲಿರುವ ಸಾಧಕರನ್ನು ಗುರುತಿಸೋಣ.ಗ್ರಾಮ ದೇವತೆ ಶ್ರೀದುರ್ಗಾಪರಮೇಶ್ವರಿಯು ಶ್ರೀ ರಾಮಭಟ್ಟರಿಗೂ ಅವರ ಕುಟುಂಬಕ್ಕೂ ಧೀರ್ಘಾಯುಷ್ಯವನ್ನೂ , ಆನಂದ ಆರೋಗ್ಯವನ್ನೂ ಕರುಣಿಸಲೆಂದು ಪ್ರಾರ್ಥಿಸುವೆ. ಸಾಧನೆ ಎಂದಾಗ ಹತ್ತಾರು ಗ್ರಂಥಗಳನ್ನು ಬರೆದಿರಬೇಕು, ಅತ್ಯಂತ ಉನ್ನತ ಹುದ್ಧೆಯಲ್ಲಿರಬೇಕು, ಎಂಬ ಭಾವನೆ ಏನೂ ಬೇಡ.ನಿಮ್ಮ ಕುಟುಂಬದಲ್ಲಿ ಯಾರಾದರೂ ಸಂಗೀತಗಾರರೇ, ಕ್ರೀಢಾಪಟುಗಳೇ, ನೃತ್ಯ ಕಲಾವಿದರೇ, ಉತ್ತಮ ಭಾಷಣಕಾರರೇ......ಯಾರನ್ನು ನಮ್ಮ ಬಂಧುಗಳಿಗೆ ಪರಿಚಯಿಸಬೇಕೆಂಬ ಆಸೆ ಇದೆಯೋ ಅವರಿಗೆಲ್ಲಾ ಸ್ವಾಗತವಿದೆ.
-ಹರಿಹರಪುರಶ್ರೀಧರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ